ಅಬ್ಬಾ ಮರಣ ಕ್ಷಣದಲ್ಲಿ ಮನುಷ್ಯನಿಗೆ ಏನೆಲ್ಲಾ ಆಗುತ್ತದೆ: ಈ ವಿದ್ವಾಂಸರು ಏನು ಹೇಳಿದ್ದಾರೆ ವಿಡಿಯೋ ನೋಡಿ

Krishnaveni K
ಶುಕ್ರವಾರ, 24 ಅಕ್ಟೋಬರ್ 2025 (09:06 IST)
Photo Credit: Instagram
ಮರಣ ಕ್ಷಣದಲ್ಲಿ ಮತ್ತು ಮರಣದ ನಂತರ ಮನುಷ್ಯನಿಗೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಇದ್ದೇ ಇದೆ. ನಮ್ಮ ಶರೀರದಿಂದ ಯಮದೂತರು ಆತ್ಮವನ್ನು ಹೇಗೆ ಕೊಂಡೊಯ್ಯುತ್ತಾರೆ ಎಂಬುದನ್ನು ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯರು ವೇದಿಕ್ ವೆಲ್ ನೆಸ್ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಹೇಳಿದ್ದಾರೆ.

ಧಾರ್ಮಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಅನೇಕ ವಿಡಿಯೋಗಳು, ಸಂದರ್ಶನಗಳನ್ನು ಪ್ರಕಟಿಸುವ ವೇದಿಕ್ ವೆಲ್ ನೆಸ್ ಎನ್ನುವ ಯೂ ಟ್ಯೂಬ್ ಚಾನೆಲ್ ನಲ್ಲಿ ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯರು ಮರಣ ಕ್ಷಣದ ಅನುಭವಗಳನ್ನು ವಿವರವಾಗಿ ಹೇಳಿದ್ದಾರೆ.

ಮರಣ ಕ್ಷಣದಲ್ಲಿ ಯಮದೂತರು ಆತ್ಮವನ್ನು ಕೊಂಡೊಯ್ಯಲು ಬರುವಾಗ ಮನುಷ್ಯ ಒಮ್ಮೆಲೇ ಸಾವಿರ ಚೇಳು ಕಡಿದ ನೋವು ಅನುಭವಿಸುತ್ತಾನೆ. ಆದರೆ ಆ ಕ್ಷಣದಲ್ಲಿ ಅವನಿಗೆ ಮಾತನಾಡಲು ಮಾತು ಬರುವುದಿಲ್ಲ. ತನಗೆ ಏನಾಗುತ್ತಿದೆ ಎಂದು ಹೇಳಿಕೊಳ್ಳಲು ಆಗುವುದಿಲ್ಲ.

ಜೀವನದಲ್ಲಿ ಸ್ವಲ್ಪವಾದರೂ ಪುಣ್ಯ ಮಾಡಿದ್ದರೆ ನಾಭಿ, ಹೃದಯ, ಕಂಠ, ಶಿರದ ಮೂಲಕ ಆತ್ಮ ಹೊರಹೋಗುತ್ತದೆ. ಪಾಪ ಕರ್ಮಗಳನ್ನೇ ಮಾಡಿದ್ದರೆ ಅಧೋಮುಖವಾಗಿ ಆತ್ಮ ಹೊರಗೆ ಹೋಗುತ್ತದೆ ಎಂದಿದ್ದಾರೆ. ಗರುಡ ಪುರಾಣದ ಪ್ರಕಾರ ಪ್ರಾಣ ಹೋಗುವ ಹಂತದಲ್ಲಿ ನಮಗೆ ಏನಾಗುತ್ತದೆ ಎಂದು ಬ್ರಹ್ಮಣ್ಯಾಚಾರ್ಯರು ವೇದಿಕ್ ವೆಲ್ ನೆಸ್ ಚಾನೆಲ್ ಗೆ ನೀಡಿದ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಗಮನಿಸಿ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮುಂದಿನ ಸುದ್ದಿ
Show comments