ನಾರ್ಮಲ್ ಡೆಲಿವರಿ ಸುಲಭವಾಗಿ ಆಗಬೇಕೆಂದರೆ ಈ ಟೆಕ್ನಿಕ್ ಫಾಲೋ ಮಾಡಿ

Krishnaveni K
ಮಂಗಳವಾರ, 21 ಅಕ್ಟೋಬರ್ 2025 (10:14 IST)
ಸಾಮಾನ್ಯವಾಗಿ ಗರ್ಭಿಣಿಯರು ನಾರ್ಮಲ್ ಹೆರಿಗೆಯಾದರೂ ಹೆಚ್ಚು ನೋವಿಲ್ಲದೇ ಸುಸ್ರೂತ್ರವಾಗಿ ಹೆರಿಗೆಯಾಗಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಿದ್ದರೆ ನಾರ್ಮಲ್ ಡೆಲಿವರಿ ಸುಲಭವಾಗಿ ಆಗಬೇಕಾದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಟೆಕ್ನಿಕ್.

ಆಕ್ಟಿವ್ ಆಗಿರಿ
ಕೆಲವರು ಗರ್ಭಿಣಿ ಎಂದು ಗೊತ್ತಾದ ತಕ್ಷಣ ಕಾಲು ನೆಲದ ಮೇಲೇ ಇಡಲ್ಲ. ಅಷ್ಟು ಬೆಡ್ ಗೆ ಅಂಟಿಕೊಂಡು ಬಿಡುತ್ತಾರೆ. ಅದನ್ನು ಬಿಟ್ಟು ಗುಡಿಸುವುದು, ಒರೆಸುವುದು ಇಂತಹ ಹೊಟ್ಟೆಗೆ ಸಣ್ಣದಾಗಿ ವ್ಯಾಯಾಮ ಸಿಗುವ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿರಬೇಕು. ಅಂದರೆ ಹೆರಿಗೆಯೂ ಸುಸ್ರೂತ್ರವಾಗಿರುತ್ತದೆ.

ಈ ರೀತಿಯ ವ್ಯಾಯಾಮ ಮಾಡಬೇಕು: ಆದಷ್ಟು ನಿಮ್ಮ ಕೆಳಹೊಟ್ಟೆಗೆ, ತೊಡೆ ಭಾಗಕ್ಕೆ ವ್ಯಾಯಾಮ ಸಿಗುವಂತೆ ನೋಡಿಕೊಳ್ಳಬೇಕು. ಮಾಂಸಖಂಡಗಳು ಬಲಯುತವಾಗಬೇಕು. ಗೋವಿನ ಭಂಗಿಯ ಸರಳ ಯೋಗಗಳನ್ನು ಮಾಡುತ್ತಿರಬೇಕು. ಪ್ರತಿನಿತ್ಯ ತಪ್ಪದೇ ವಾಕಿಂಗ್ ಮಾಡಬೇಕು. ಹಾಗೂ ಉಸಿರಾಟದ ವ್ಯಾಯಾಮ ಅಂದರೆ ಪ್ರಾಣಾಯಾಮದಂತಹ ವ್ಯಾಯಾಮಗಳನ್ನು ಮಾಡುತ್ತಿರಬೇಕು. ಇದರಿಂದ ನೋವು ತಡೆಯುವ ಶಕ್ತಿ ನಿಮಗೆ ಬರುತ್ತದೆ.

ಕುಳಿತುಕೊಳ್ಳುವ ಭಂಗಿ ಹೀಗಿರಲಿ
ಇಳಿ ಬೀಳುವ ಭಂಗಿಯಲ್ಲಿ ಕುಳಿತುಕೊಳ್ಳುವುದು, ಏಳುವುದು ಮಾಡಬೇಡಿ. ಕುಳಿತುಕೊಳ್ಳುವಾಗ ನಿಮ್ಮ ಮೊಣಕಾಲುಗಳು ಯಾವತ್ತೂ ಸೊಂಟದ ಮಟ್ಟಕ್ಕಿಂತ ಕೆಳಗೇ ಇರಲಿ. ಅಂದರೆ ಕಾಲು ಮೇಲೆತ್ತಿ ಕೂರುವುದು, ಜೋತು ಬಿದ್ದಂತೆ ಕೂರುವುದು ಮಾಡಬೇಡಿ. ಸಮತಟ್ಟಾದ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ 10 ರಿಂದ 15 ನಿಮಿಷ ಸರಳ ವ್ಯಾಯಾಮ ಮಾಡಿ. ಆದಷ್ಟು ಒಂದೇ ಕಡೆ ಸುದೀರ್ಘ ಅವಧಿವರೆಗೆ ಕೂರುವುದು ಅಥವಾ ಮಲಗಿಕೊಂಡಿರಬೇಡಿ. ದೇಹವನ್ನು ಸಡಿಲಗೊಳಿಸಿ, ಅತ್ತಿತ್ತ ಓಡಾಡುತ್ತಿರಿ.

ಇದರ ಜೊತೆಗೆ ಸಮತೋಲಿತ ಆಹಾರ, ಸಾಕಷ್ಟು ಪ್ರಮಾಣದಲ್ಲಿ ನೀರು ಅಥವಾ ನೀರಿನಂಶ ಸೇವನೆ ಮಾಡುವುದು, ಕಬ್ಬಿಣದಂಶ ಹೇರಳವಾಗಿರುವ ಆಹಾರ ಸೇವನೆ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಗರ್ಭಿಣಿಯಾಗಿದ್ದೀರೆಂದು ಬೇಕಾಬಿಟ್ಟಿ ತಿಂದು ದೇಹ ತೂಕ ಅತಿಯಾಗಿ ಹೆಚ್ಚಿಸಿಕೊಳ್ಳದಂತೆ ಎಚ್ಚರವಹಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೌಡಿಶೀಟರ್‌ ಕೊಲೆ ಪ್ರಕರಣ, ಒಂದು ದಿನದ ಮಟ್ಟಿಗೆ ಬೈರತಿ ಬಸವರಾಜ್‌ಗೆ ರಿಲೀಫ್‌ ಸಿಕ್ಕಿದ್ದೇಗೆ

ಕರೂರ್ ದುರಂತದ ಬಳಿಕ ವಿಜಯ್ ರ್ಯಾಲಿಯಲ್ಲಿ ಇಂದು ಮತ್ತೊಂದು ಸಾವು

ವಿರೋಧ ಪಕ್ಷದ ವೈಫಲ್ಯ ಆಡಳಿತ ಪಕ್ಷಕ್ಕೆ ಸಿಕ್ಕಿದೆ: ಬಸನಗೌಡ ಪಾಟೀಲ್ ಯತ್ನಾಳ್

ಪ್ರಧಾನಿ ಮೋದಿ ಫೆಬ್ರವರಿ 22 ರಂದು ಮೀರತ್‌ಗೆ ಭೇಟಿ

ಸಾವಿರಾರು ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾದ ಸರಕಾರ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments