Select Your Language

Notifications

webdunia
webdunia
webdunia
webdunia

ಡಾ ಸಿಎನ್ ಮಂಜುನಾಥ್ ಪ್ರಕಾರ ಸಕ್ಕರೆ ಖಾಯಿಲೆ ದೂರ ಮಾಡಲು ಈ ಆಹಾರ ಬೆಸ್ಟ್

Dr CN Manjunath

Krishnaveni K

ಬೆಂಗಳೂರು , ಶನಿವಾರ, 11 ಅಕ್ಟೋಬರ್ 2025 (09:35 IST)
ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದವೊಂದರಲ್ಲಿ ಸಕ್ಕರೆ ಖಾಯಿಲೆ ದೂರ ಮಾಡಲು ಯಾವ ಆಹಾರ ಬೆಸ್ಟ್ ಎಂದು ಹೇಳಿದ್ದಾರೆ. ಅವರು ಏನು ಹೇಳಿದ್ದರು ನೋಡಿ.

ಆಧುನಿಕ ಜಗತ್ತಿನಲ್ಲಿ ನಮ್ಮ ಆಹಾರ ಶೈಲಿಯೇ ಅನೇಕ ರೋಗಗಳಿಗೆ ಕಾರಣವಾಗಿದೆ. ಅಧಿಕ ಕೊಬ್ಬಿನಂಶವಿರುವ ಆಹಾರ, ಫಾಸ್ಟ್ ಫುಡ್ ಇತ್ಯಾದಿಗಳಿಗೆ ನಾವು ಮಾರು ಹೋಗಿದ್ದೇವೆ. ಇಂತಹ ಆಹಾರ ಸೇವನೆ ನಮ್ಮ ದೇಹಕ್ಕೆ ಮಾರಕವಾಗುತ್ತದೆ.

ಅದರ ಬದಲು ನಮ್ಮ ಆಹಾರದಲ್ಲಿ ಸಿರಿ ಧಾನ್ಯಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಸಿರಿ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ದೇಹ ಹೆಚ್ಚು ಆರೋಗ್ಯವಾಗಿರುತ್ತದೆ. ವಿಶೇಷವಾಗಿ ಸಿರಿ ಧಾನ್ಯಗಳ ಸೇವನೆಯಿಂದ ಸಕ್ಕರೆ ಖಾಯಿಲೆ ದೂರ ಮಾಡಬಹುದು. ಸಿರಿ ಧಾನ್ಯಗಳಲ್ಲಿ ಬೇಡದ ಕೊಬ್ಬಿನಂಶವೂ ಇರಲ್ಲ. ಹೀಗಾಗಿ ರಕ್ತದೊತ್ತಡ ಮತ್ತು ಬೊಜ್ಜು ಕಡಿಮೆ ಮಾಡಬಹುದು. ತೂಕ ಇಳಿಕೆ ಮಾಡುವವರಿಗೆ ಇದು ಬೆಸ್ಟ್ ಆಹಾರ.

ಇನ್ನು ಸಿರಿ ಧಾನ್ಯಗಳಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ಇದರಿಂದ ರಕ್ತ ಹೀನತೆ ಅಪಾಯವೂ ಇರಲ್ಲ. ಹೀಗಾಗಿ ಸಿರಿ ಧಾನ್ಯಗಳನ್ನು ನಮ್ಮ ಆಹಾರದಲ್ಲಿ ಸೇರಿಸಿ ಔಷಧಿಗಳಿಂದ ದೂರವಿರೋಣ ಎಂದು ಒಮ್ಮೆ ಅವರು ಕರೆ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಆರು ತಿಂಗಳೊಳಗಿನ ಮಕ್ಕಳಿಗೆ ಕೆಮ್ಮು ಇದ್ದರೆ ಏನು ಮಾಡಬೇಕು: ಇಲ್ಲಿದೆ ಗೈಡ್ ಲೈನ್ಸ್