Select Your Language

Notifications

webdunia
webdunia
webdunia
webdunia

ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿತೇ ಬಿಸಿಸಿಐ?

ಯುವರಾಜ್ ಸಿಂಗ್ ಗೆ ನಿರ್ಗಮನದ ಹಾದಿ ತೋರಿತೇ ಬಿಸಿಸಿಐ?
ಮುಂಬೈ , ಸೋಮವಾರ, 11 ಸೆಪ್ಟಂಬರ್ 2017 (08:17 IST)
ಮುಂಬೈ: ಯುವರಾಜ್ ಸಿಂಗ್ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಬಹುದು ಎಂದು ಬಿಸಿಸಿಐ ಆಯ್ಕೆಗಾರರು ಸೂಚಿಸಿದಂತಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ನಿರೀಕ್ಷೆಯಂತೇ ಅವರನ್ನು ಕಡೆಗಣಿಸಲಾಗಿದೆ.

 
ಇದರಿಂದಾಗಿ ಎಡಗೈ ಆಲ್ ರೌಂಡರ್ ವೃತ್ತಿ ಬದುಕು ಮುಕ್ತಾಯದ ಹಂತದಲ್ಲಿದೆ ಎನ್ನಬಹುದು. ಅವರ ಸ್ಥಾನಕ್ಕೆ ಭಾರತ ತಂಡದಲ್ಲಿ ಸಮರ್ಥ ಆಲ್ ರೌಂಡರ್ ಗಳಾದ ಕೇದಾರ್ ಜಾದವ್, ಮನೀಶ್ ಪಾಂಡೆ ಅವರನ್ನು ಕರೆತರಲಾಗುತ್ತಿದೆ. ಪ್ರತಿಭಾವಂತ ಅಜಿಂಕ್ಯಾ ರೆಹಾನೆ ಸ್ಥಾನವಿಲ್ಲದೇ ಒದ್ದಾಡುತ್ತಿದ್ದಾರೆ.

ಈ ಎಲ್ಲಾ ಹಿನ್ನಲೆಯಲ್ಲಿ ಹಿರಿಯ ಯುವರಾಜ್ ಸಿಂಗ್ ವೃತ್ತಿ ಬದುಕು ಅಕ್ಷರಶಃ ಕೊನೆಯಾದಂತೇ ಆಗಿದೆ. ಹರ್ಭಜನ್ ಸಿಂಗ್, ಜಹೀರ್ ಖಾನ್ ರಂತೇ ಯುವಿ ವೃತ್ತಿ ಬದುಕೂ ಸದ್ದಿಲ್ಲದೇ ತೆರೆ ಮರೆಗೆ ಸರಿಯುತ್ತಿದೆ.

ಇದನ್ನೂ ಓದಿ.. ಕೊಹ್ಲಿ ಎಂದರೆ ಯಾರು? ಎಂದು ಕೇಳಿದ್ದಕ್ಕೆ ಆಕೆಗೆ ಸಿಕ್ಕ ಉತ್ತರ ನೋಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಎಂದರೆ ಯಾರು? ಎಂದು ಕೇಳಿದ್ದಕ್ಕೆ ಆಕೆಗೆ ಸಿಕ್ಕ ಉತ್ತರ ನೋಡಿ!