Select Your Language

Notifications

webdunia
webdunia
webdunia
webdunia

ದ್ರಾವಿಡ್ ನಿಂದ ತೆರವಾಗುತ್ತಿರುವ ಸ್ಥಾನಕ್ಕೆ ಒಲ್ಲೆ ಎಂದ ವಿವಿಎಸ್ ಲಕ್ಷ್ಮಣ್

ದ್ರಾವಿಡ್ ನಿಂದ ತೆರವಾಗುತ್ತಿರುವ ಸ್ಥಾನಕ್ಕೆ ಒಲ್ಲೆ ಎಂದ ವಿವಿಎಸ್ ಲಕ್ಷ್ಮಣ್
ಮುಂಬೈ , ಮಂಗಳವಾರ, 19 ಅಕ್ಟೋಬರ್ 2021 (08:50 IST)
ಮುಂಬೈ: ರಾಹುಲ್ ದ್ರಾವಿಡ್ ರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲು ಹೊರಟಿರುವ ಬಿಸಿಸಿಐ ಈಗ  ಅವರು ಮುಖ್ಯಸ್ಥರಾಗಿರುವ ಎನ್ ಸಿಎಗೆ ಮತ್ತೊಬ್ಬರನ್ನು ಕರೆತರಲು ಪ್ರಯತ್ನ ನಡೆಸಿದೆ.


ಈ ನಡುವೆ ಬಿಸಿಸಿಐ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಗೆ ಎನ್ ಸಿಎ ಅಧ‍್ಯಕ್ಷ ಪದವಿ ಸ್ವೀಕರಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ. ಆದರೆ ಲಕ್ಷ್ಮಣ್ ಈ ಸ್ಥಾನ ಅಲಂಕರಿಸಲು ನಿರಾಕರಿಸಿದ್ದಾರೆ.

ಸದ್ಯಕ್ಕೆ ಬೆಂಗಾಳ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಮತ್ತು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಷ್ಮಣ್ ಎನ್ ಸಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಬಿಸಿಸಿಐ ದ್ರಾವಿಡ್ ಸ್ಥಾನಕ್ಕೆ ಮತ್ತೊಬ್ಬರ ತಲಾಷ್ ಮುಂದುವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಶಾನ್ ಕಿಶನ್ ಗೆ ಕೀಪಿಂಗ್, ಕೊಹ್ಲಿಗೆ ನಾಯಕತ್ವದ ಪಾಠ: ಧೋನಿ ಕ್ಲಾಸ್ ಶುರು