Select Your Language

Notifications

webdunia
webdunia
webdunia
webdunia

ಐಪಿಎಲ್ ಮಾಲಿಕರ ಸೀಕ್ರೆಟ್ ಲೆಕ್ಕಾಚಾರ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್

ಐಪಿಎಲ್ ಮಾಲಿಕರ ಸೀಕ್ರೆಟ್ ಲೆಕ್ಕಾಚಾರ ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್
ಕೋಲ್ಕೊತ್ತಾ , ಶುಕ್ರವಾರ, 19 ಜನವರಿ 2018 (08:27 IST)
ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ಆವೃತ್ತಿಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ತನ್ನ ಚಾಂಪಿಯನ್ ನಾಯಕ ಗೌತಮ್ ಗಂಭೀರ್ ರನ್ನೇ ತಂಡದಲ್ಲಿ ಉಳಿಸಿಕೊಳ್ಳದೇ ಹರಾಜಿಗೆ ಬಿಟ್ಟಿದ್ದರ ಹಿಂದಿನ ಲೆಕ್ಕಾಚಾರವನ್ನು ಮಾಜಿ ಕ್ರಿಕೆಟಿಗ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
 

ಕ್ರೀಡಾ ಚಾನೆಲ್ ನ ಐಪಿಎಲ್ ಕಾರ್ಯಕ್ರಮದ ರಾಯಭಾರಿಯಾಗಿರುವ ಸೆಹ್ವಾಗ್ ‘ಗಂಭೀರ್ ರನ್ನು ಕೋಲ್ಕೊತ್ತಾ ತಂಡ ಉಳಿಸಿಕೊಳ್ಳದೇ ಇದ್ದಿದ್ದು ನನಗೆ ಅಚ್ಚರಿಯುಂಟು ಮಾಡಿಲ್ಲ. ಗಂಭೀರ್ ಮತ್ತೆ ಕೆಕೆಆರ್ ತಂಡಕ್ಕೆ ಆಯ್ಕೆಯಾಗಬಹುದು’ ಎಂದು ಸೆಹ್ವಾಗ್ ಹೇಳಿದ್ದಾರೆ.

ಹಾಗಿದ್ದರೆ ಕೆಕೆಆರ್ ಗಂಭೀರ್ ರನ್ನು ಕೈ ಬಿಟ್ಟಿದ್ದೇಕೆ? ‘ಮತ್ತೊಮ್ಮೆ ಇದೇ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಖರೀದಿಸುವ ಯೋಜನೆ ಕೆಲವು ಮಾಲಿಕರಿಗಿರುತ್ತದೆ. ಅದೇ ಕಾರಣಕ್ಕೆ ಈಗ ಹರಾಜಿಗೆ ಇಳಿಸಿ ತಾವೇ ಇನ್ನಷ್ಟು ಕಡಿಮೆ ದರಕ್ಕೆ ಖರೀದಿ ಮಾಡುತ್ತವೆ. ದೆಹಲಿ ತಂಡ ನನ್ನನ್ನು ಕೈ ಬಿಟ್ಟಾಗಲೂ ಇದೇ ಯೋಜನೆ ನಡೆಸಿತ್ತು’ ಎಂದು ಸೆಹ್ವಾಗ್ ರಹಸ್ಯ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯ ಮೇಲೆ ಕಪಿಲ್ ದೇವ್ ಗೆ ಯಾಕೆ ಅಸಮಾಧಾನ?