Publish Date: Tue, 20 Aug 2019 (10:25 IST)
Updated Date: Tue, 20 Aug 2019 (10:27 IST)
ಬೆಂಗಳೂರು: ರಾಜ್ಯ ಕಂಡ ಅದ್ಭುತ ಪ್ರತಿಭೆ ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ. ಅವರಿನ್ನು ಪಾಂಡಿಚೇರಿ ಪರ ಕ್ರಿಕೆಟ್ ಆಡಲಿದ್ದಾರೆ.
ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕರಾಗಿದ್ದ ವಿನಯ್ ಕುಮಾರ್ ಇನ್ನು ಮುಂದೆ ಪಾಂಡಿಚೇರಿ ಪರ ಆಟಗಾರನಾಗಿ ಮತ್ತು ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಈ ದಿಡೀರ್ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಈ ಮೂಲಕ ಮತ್ತೊಬ್ಬ ರಾಜ್ಯದ ಪ್ರತಿಭೆ ಬೇರೆ ರಾಜ್ಯಕ್ಕೆ ವಲಸೆ ಹೋದಂತಾಗಿದೆ. ಇದಕ್ಕೂ ಮೊದಲು ರಾಬಿನ್ ಉತ್ತಪ್ಪ ಕೂಡಾ ರಾಜ್ಯದಿಂದ ಸೌರಾಷ್ಟ್ರ ತಂಡಕ್ಕೆ ವಲಸೆ ಹೋಗಿದ್ದರು.