Select Your Language

Notifications

webdunia
webdunia
webdunia
webdunia

ಐಪಿಎಲ್ ನಿಂದ ಸುರೇಶ್ ರೈನಾ ಹೊರಬರಲು ಆ ಕೊಲೆಯೇ ಕಾರಣ!

ಐಪಿಎಲ್ ನಿಂದ ಸುರೇಶ್ ರೈನಾ ಹೊರಬರಲು ಆ ಕೊಲೆಯೇ ಕಾರಣ!
ದುಬೈ , ಭಾನುವಾರ, 30 ಆಗಸ್ಟ್ 2020 (09:55 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ದಿಡೀರ್ ಆಗಿ ವೈಯಕ್ತಿಕ ಕಾರಣ ನೀಡಿ ಕೂಟದಿಂದಲೇ ನಿರ್ಗಮಿಸಿರುವುದಕ್ಕೆ ಕಾರಣ ತಿಳಿದುಬಂದಿದೆ.

 

ಸುರೇಶ್ ರೈನಾ ಸಂಬಂಧಿಗಳ ಮನೆಯಲ್ಲಿ ನಡೆದ ಆ ಕೊಲೆಯೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಆಗಸ್ಟ್ 19 ರಂದು ರೈನಾ ತಂದೆಯ ತಂಗಿ ಮನೆಯಲ್ಲಿ ಅನಾಮಧೇಯ ವ್ಯಕ್ತಿಗಳಿಂದ ದಾಳಿಯಾಗಿತ್ತು. ಇದರಲ್ಲಿ ರೈನಾ ಮಾವ ತೀರಿಕೊಂಡರೆ ಅತ್ತೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ಕುಟುಂಬದಲ್ಲಿ ನಡೆದಿರುವ ಈ ಧಾರುಣ ಘಟನೆಯ ಹಿನ್ನಲೆಯಲ್ಲೇ ರೈನಾ ಐಪಿಎಲ್ ನಿಂದ ಹಿಂದೆ ಸರಿದು ತವರಿಗೆ ಮರಳಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಸ್ ಕೆ ವೇಗಿ ದೀಪಕ್ ಚಹರ್ ಗೆ ಕೊರೋನಾ: ಐಪಿಎಲ್ 13 ವೇಳಾಪಟ್ಟಿಗೆ ತಾತ್ಕಾಲಿಕ ಬ್ರೇಕ್