Publish Date: Tue, 25 Aug 2020 (09:33 IST)
Updated Date: Tue, 25 Aug 2020 (09:35 IST)
ಕೋಲ್ಕೊತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಾಜಕೀಯ ಸೇರ್ಪಡೆ ಬಗ್ಗೆ ವದಂತಿಗಳು ಹಬ್ಬಿವೆ. ಈ ಬಾರಿ ಇದಕ್ಕೆ ಕೆಲವು ಪುರಾವೆಗಳೂ ಸಿಕ್ಕಿವೆ.
ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಬಲ ನೀಡಿದಾಗ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಆಗ ಗಂಗೂಲಿ ಅದನ್ನು ನಿರಾಕರಿಸಿದ್ದರು.
ಇದೀಗ ಗಂಗೂಲಿ ತಮಗಾಗಿ ಪಶ್ಚಿಮ ಬಂಗಾಲ ಸರ್ಕಾರ ನೀಡಿದ್ದ 2 ಎಕರೆ ಜಮೀನನ್ನು ಹಿಂದಿರುಗಿಸಿದ್ದು, ಅವರು ಬಿಜೆಪಿ ಸೇರಲಿರುವುದಕ್ಕೆ ಇಡುತ್ತಿರುವ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಗಂಗೂಲಿ ಏನೂ ಪ್ರತಿಕ್ರಿಯೆ ನೀಡಿಲ್ಲ.