Select Your Language

Notifications

webdunia
webdunia
webdunia
webdunia

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

Smriti Mandhana Marriage

Sampriya

ಬೆಂಗಳೂರು , ಮಂಗಳವಾರ, 25 ನವೆಂಬರ್ 2025 (20:07 IST)
Photo Credit X
ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ- ಮ್ಯೂಸಿಕ್ ಡೈರೆಕ್ಟರ್‌ ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವೂ ಮುಂದೂಡಲಾಗಿರುವ ಹಿನ್ನೆಲೆ ಹಲವು ಗೊಂದಲಗಳು ಹರಿದಾಡುತ್ತಿದೆ. 

ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದ ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿಯಿತ್ತು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ಮೃತಿ ಮದುವೆಯಾಗಬೇಕಿದ್ದ ಪಲಾಶ್‌ಗೆ ಬೇರೆ ಯುವತಿಯೊಂದಿಗೆ ಪ್ರಣಯದಿಂದ ಮಾತನಾಡಿರುವ ಚಾಟ್‌ಲಿಸ್ಟ್‌ ವೈರಲ್ ಆಗಿದೆ. ಈ ವಿಚಾರವಾಗಿಯೇ ಸ್ಮೃತಿ ತಂದೆ ಹಾಗೂ ಮಲಾಶ್ ನಡುವೆ ದೊಡ್ಡ ಜಗಳವಾಗಿದೆ ಎಂಬ ಸುದ್ದಿಯಿದೆ. 

ಇದೀಗ ಪಲಾಶ್ ಮುಚ್ಚಲ್ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯಿದೆ. ವರನಿಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವೈರಲ್ ಸೋಂಕು ಮತ್ತು ಹೆಚ್ಚಿದ ಆಮ್ಲೀಯತೆಯಿಂದಾಗಿ ಸೋಮವಾರ ಪಲಾಶ್ ಅವರನ್ನು ಸಾಂಗ್ಲಿ (ಮಹಾರಾಷ್ಟ್ರ) ದ ಆಸ್ಪತ್ರೆಗೆ  ಕರೆದೊಯ್ಯಲಾಯಿತು ಎಂದು ಸೋಮವಾರ ವರದಿಯಾಗಿದೆ. ಆದರೆ ಇದೀಗ ಅವರನ್ನು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. 

ಪಲಾಶ್ ಅವರನ್ನು ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ವಿಆರ್ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು.

ಸಂಗೀತ್‌ ಮತ್ತು ಮದುವೆಗಳಿಗಾಗಿ ನಿರಂತರ ಪ್ರಯಾಣವು ಅವರನ್ನು ತೀವ್ರ ಒತ್ತಡಕ್ಕೆ ಒಳಪಡಿಸಿತು, ಇದು ಅಂತಿಮವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಪಲಾಶ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ತೀವ್ರತೆ ಇನ್ನೂ ತಿಳಿದುಬಂದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ