ನಿಗೂಢವಾಗಿದೆ ಸುರೇಶ್ ರೈನಾ ವಾಪಸಾತಿ! ಧೋನಿ ಜತೆ ವೈಮನಸ್ಯ?

Webdunia
ಸೋಮವಾರ, 31 ಆಗಸ್ಟ್ 2020 (11:23 IST)
ದುಬೈ: ಐಪಿಎಲ್ ಆಡಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ದಿಡೀರ್ ವಾಪಸಾತಿ ನಿಗೂಢವಾಗಿದೆ.


ವೈಯಕ್ತಿಕ ಕಾರಣ ನೀಡಿ ರೈನಾ ಐಪಿಎಲ್ ಕೂಟದಿಂದಲೇ ಹೊರನಡೆದಿದ್ದಾರೆ. ಆದರೆ ಆ ವೈಯಕ್ತಿಕ ಕಾರಣ ಅವರ ಕುಟುಂಬದಲ್ಲಿ ನಡೆದಿದ್ದ ಕೊಲೆಗಳು ಕಾರಣವಿರಬಹುದು ಎಂದು ಒಮ್ಮೆ ಸುದ್ದಿಯಾದರೆ, ಇನ್ನೊಂದು ಮೂಲಗಳು ರೈನಾಗೆ ಕೊರೋನಾ ಆತಂಕ ಶುರುವಾಗಿತ್ತು ಎನ್ನುತ್ತಿವೆ. ಈ ನಡುವೆ ಸ್ಥಳೀಯ ದೈನಿಕವೊಂದಕ್ಕೆ ರೈನಾ ಹೇಳಿಕೆ ನೀಡಿದ್ದು ‘ನನ್ನ ಮಕ್ಕಳಿಗಿಂತ ದೊಡ್ಡದು ಬೇರೆ ಏನೂ ಇಲ್ಲ’ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಚೆನ್ನೈ ಮಾಲಿಕ ಎನ್ ಶ್ರೀನಿವಾಸನ್ ನಾವು ಯಾರನ್ನೂ ಕೂಡಿಟ್ಟುಕೊಳ್ಳಲ್ಲ ಎಂದು ರೈನಾ ಮೇಲೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ದುಬೈನಲ್ಲಿ ಧೋನಿ ನೀಡಿದಂತಹದ್ದೇ ಹೋಟೆಲ್ ಕೊಠಡಿ ತನಗೂ ನೀಡಬೇಕು ಎಂದು ರೈನಾ ಆಗ್ರಹಿಸಿದ್ದರು. ಈ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಧೋನಿ ಜತೆಗೆ ಈ ವಿಚಾರವಾಗಿ ವಿರಸವೇರ್ಪಟ್ಟಿತ್ತು ಎಂಬ ಸುದ್ದಿಗಳೂ ಓಡಾಡುತ್ತಿವೆ. ಆದರೆ ಯಾವುದು ನಿಜ ಎಂಬುದು ನಿಗೂಢವಾಗಿಯೇ ಉಳಿದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ರಾಜಸ್ಥಾನ ರಾಯಲ್ಸ್‌ಗೆ ಗೆಲುವಿನ ವೈಭವ: ಸೋತು ಅಭಿಯಾನ ಮುಗಿಸಿದ ಸನ್‌ರೈಸರ್ಸ್‌ ಹೈದರಾಬಾದ್‌

IPL 2026: ಸೂರ್ಯವಂಶಿಗೆ ದಾಖಲೆಯ ಶತಕ ಜಸ್ಟ್‌ಮಿಸ್‌: ಸನ್‌ರೈಸರ್ಸ್‌ ತಂಡಕ್ಕೆ ಕಠಿಣ ಗುರಿ ನೀಡಿದ ರಾಯಲ್ಸ್‌

IPL 2026: ದೈತ್ಯ ಬ್ಯಾಟರ್‌ ಕ್ರೀಸ್‌ ಗೇಲ್ ಸಿಕ್ಸರ್‌ ದಾಖಲೆಯನ್ನು ಉಡೀಸ್‌ ಮಾಡಿದ ವೈಭವ್‌ ಸೂರ್ಯವಂಶಿ

IPL 2026: ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಸನ್‌ರೈಸರ್ಸ್‌: ರಾಯಲ್ಸ್‌ಗೆ ಆರಂಭಿಕ ಆಘಾತ

IPL 2026: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿಗೆ ಮಾಜಿ ಮಾಲೀಕ ವಿಜಯ್‌ ಮಲ್ಯರಿಂದ ವಿಶ್‌

ಮುಂದಿನ ಸುದ್ದಿ
Show comments