Select Your Language

Notifications

webdunia
webdunia
webdunia
webdunia

ಹುತಾತ್ಮ ಯೋಧರಿಗೆ ದೇಣಿಗೆ ಸಂಗ್ರಹಿಸಲು ಈ ಕೆಲಸ ಮಾಡಿದರು ಸಚಿನ್ ತೆಂಡುಲ್ಕರ್!

ಸಚಿನ್ ತೆಂಡುಲ್ಕರ್
ಮುಂಬೈ: ಮೊನ್ನೆಯಷ್ಟೇ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ನೆರವಾಗಲು ಸಚಿನ್ ತೆಂಡುಲ್ಕರ್ ತಮ್ಮ ದೇಹ ದಂಡಿಸಿಕೊಂಡಿದ್ದಾರೆ.


ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರು ಸೇರಿದಂತೆ ಹುತಾತ್ಮ ಯೋಧರಿಗೆ ನೆರವಾಗುವಂತಹ ಭಾರತ್ ಕೇ ವೀರ್ ಫಂಡ್ ಗೆ ದೇಣಿಗೆ ಸಂಗ್ರಹಿಸಲು ಸಚಿನ್ ದೆಹಲಿಯಲ್ಲಿ ನಡೆದ ಮ್ಯಾರಥಾನ್ ವೇಳೆ ಪುಶ್ ಅಪ್ ಚಾಲೆಂಜ್ ಮಾಡಿದ್ದಾರೆ.

10 ಪುಶ್ ಅಪ್ ಪೂರ್ತಿಗೊಳಿಸುವ ಸವಾಲು ಸ್ವೀಕರಿಸಿದ ಸಚಿನ್ ಮ್ಯಾರಥಾನ್ ನಲ್ಲಿ ಸಾಮಾನ್ಯರಂತೆ ಪಾಲ್ಗೊಂಡು ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ತಮ್ಮ ಅಭಿಮಾನಿಗಳಿಗೂ ನೆರವಾಗಲು ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೇ ಟೀಸ್ ಮಾಡಿ ಸವಾಲು ಹಾಕಿದ ಶಿಷ್ಯ ರಿಷಬ್ ಪಂತ್!