Publish Date: Wed, 01 May 2019 (07:58 IST)
Updated Date: Wed, 01 May 2019 (08:00 IST)
ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಏನೇ ಸಮಸ್ಯೆ, ಅನುಮಾನ ಬಂದರೂ ಪರಿಹರಿಸುವುದು ನನ್ನ ಕರ್ತವ್ಯ ಎಂದು ಉಪನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ನಾನು ಏನೇ ಸಮಸ್ಯೆ ಬಂದರೂ ಧೋನಿ, ರೋಹಿತ್ ಅಭಿಪ್ರಾಯ ಕೇಳುವುದಾಗಿ ಹೇಳಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ರೋಹಿತ್ ಕೂಡಾ ಇದೇ ಮಾತು ಹೇಳಿದ್ದರು.
‘ಉಪನಾಯಕನಾಗಿ ಕಷ್ಟದ ಸಂದರ್ಭದಲ್ಲಿ ನಾಯಕನಿಗೆ ಜತೆಯಾಗುವುದು ನನ್ನ ಕರ್ತವ್ಯ. ಕಳೆದ ಕೆಲವು ವರ್ಷಗಳಿಂದಲೂ ಇದನ್ನೇ ಮಾಡುತ್ತಿದ್ದೇನೆ. ಧೋನಿ ನಾಯಕರಾಗಿದ್ದಾಗ ಅವರಿಗೆ ಸೆಹ್ವಾಗ್, ಸಚಿನ್ ರಂತಹ ಹಿರಿಯ ಆಟಗಾರರು ಇದ್ದರು. ಈಗ ಕೊಹ್ಲಿಗೆ ನಾವಿದ್ದೇವೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ