Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ಹೇಳಿಕೆ ಬೆನ್ನಲ್ಲೇ ಮೈದಾನಕ್ಕಿದ ರೋಹಿತ್ ಶರ್ಮಾ

ಸೌರವ್ ಗಂಗೂಲಿ ಹೇಳಿಕೆ ಬೆನ್ನಲ್ಲೇ ಮೈದಾನಕ್ಕಿದ ರೋಹಿತ್ ಶರ್ಮಾ
ಮುಂಬೈ , ಬುಧವಾರ, 4 ನವೆಂಬರ್ 2020 (09:52 IST)
ಮುಂಬೈ: ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ಮತ್ತೆ ಫಿಟ್ನೆಸ್‍ ಸಾಬೀತುಪಡಿಸಿದರೆ ಆಯ್ಕೆಗೆ ಪರಿಗಣಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ ಬೆನ್ನಲ್ಲೇ ರೋಹಿತ್ ಮುಂಬೈ ಇಂಡಿಯನ್ಸ್ ಪರ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.


ರೋಹಿತ್ ಆಯ್ಕೆ ಮಾಡದೇ ಇದ್ದಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ವಿಚಾರವನ್ನು ಬಿಸಿಸಿಐ ಅಧ್ಯಕ್ಷ ಗಂಗೂಲಿ ಬಳಿ ಮಾಧ್ಯಮಗಳು ಪ್ರಶ್ನಿಸಿದಾಗ ಒಂದು ವೇಳೆ ರೋಹಿತ್ ದೈಹಿಕ ಸದೃಢತೆ ಸಾಬೀತುಪಡಿಸಿದರೆ ರೋಹಿತ್ ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡುವ ಕುರಿತು ಪರಿಗಣಿಸಲಾಗುವುದು ಎಂದಿದ್ದರು. ಇದರ ಬೆನ್ನಲ್ಲೇ ರೋಹಿತ್ ನಿನ್ನೆ ಪಂದ್ಯವಾಡಿದ್ದಾರೆ. ಇದರೊಂದಿಗೆ ಅವರಿಗೆ ಗಾಯವಾಗಿರುವುದು ನಿಜವೇ, ನಿಜವಾಗಿಯೂ ಗಂಭೀರವೇ ಎಂಬ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟುಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಅಂತಿಮ ಪಂದ್ಯದಲ್ಲಿ ಮುಂಬೈಗೆ ಸೋಲು