Publish Date: Wed, 25 May 2022 (09:00 IST)
Updated Date: Wed, 25 May 2022 (09:19 IST)
ಮುಂಬೈ: ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೆಲವು ಆಟಗಾರರು ಆಯ್ಕೆಯಾಗದೇ ಇರುವುದು ಫ್ಯಾನ್ಸ್ ಟೀಕೆಗೆ ಗುರಿಯಾಗಿದೆ.
ಅವರಲ್ಲಿ ಶಿಖರ್ ಧವನ್ ಕೂಡಾ ಒಬ್ಬರು. ಐಪಿಎಲ್ ನಲ್ಲಿ ರನ್ ಗಳಿಸಿದರೂ ಧವನ್ ರನ್ನು ಆಯ್ಕೆ ಮಾಡದೇ ಇರುವ ಬಗ್ಗೆ ಮಾಜಿ ಕ್ರಿಕೆಟಿಗರೂ ಸಾಕಷ್ಟು ಟೀಕೆ ಮಾಡಿದ್ದರು.
ಆದರೆ ಧವನ್ ಕೈ ಬಿಡುವ ಮುನ್ನ ಕೋಚ್ ರಾಹುಲ್ ದ್ರಾವಿಡ್ ಧವನ್ ಜೊತೆ ಮಾತುಕತೆ ನಡೆಸಿದ್ದರು ಎಂಬ ವಿಚಾರ ಕೇಳಿಬಂದಿದೆ. ಟೀಂ ಇಂಡಿಯಾದಿಂದ ಕೈ ಬಿಡುವ ಮುನ್ನ ಆಟಗಾರರು ಮಾನಸಿಕವಾಗಿ ಕುಗ್ಗಿ ಹೋಗದಂತೆ ದ್ರಾವಿಡ್ ಸಂವಹನ ನಡೆಸಿ ಕಾರಣ ತಿಳಿಸುತ್ತಾರೆ. ಅದೇ ರೀತಿ ಧವನ್ ಗೂ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.