ಗುರು ದ್ರಾವಿಡ್ ರಿಂದ ಬೆನ್ನುತಟ್ಟಿಸಿಕೊಂಡ ಹಾರ್ದಿಕ್ ಪಾಂಡ್ಯ

Webdunia
ಬುಧವಾರ, 27 ಸೆಪ್ಟಂಬರ್ 2017 (07:26 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಹೊಸ ಅಲೆ ಸೃಷ್ಟಿಸಿದ ಆಟಗಾರ ಹಾರ್ದಿಕ್ ಪಾಂಡ್ಯ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಈ ಕ್ರಿಕೆಟಿಗನಿಗೆ ಮಾಜಿ ನಾಯಕ, ಸದ್ಯಕ್ಕೆ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಹೊಗಳಿದ್ದಾರೆ.

 
ಒಂದು ಕಾಲದಲ್ಲಿ ಇದೇ ದ್ರಾವಿಡ್ ಗರಡಿಯಲ್ಲಿ ಪಳಗಿದ ಹಾರ್ದಿಕ್ ಟೀಂ ಇಂಡಿಯಾಗೆ ಕಾಲಿಟ್ಟ ಆರಂಭದ ದಿನಗಳಲ್ಲೇ ತಮ್ಮ ಯಶಸ್ಸಿಗೆ ದ್ರಾವಿಡ್ ತರಬೇತಿ ಕಾರಣ ಎಂದಿದ್ದರು. ಇದೀಗ ಶಿಷ್ಯನಿಗೆ ಸ್ವತಃ ದ್ರಾವಿಡ್ ಶಹಬಾಶ್ ಗಿರಿ ಕೊಟ್ಟಿದ್ದಾರೆ.

ಪಾಂಡ್ಯ ಈಗ ಪರಿಪೂರ್ಣ ಆಟಗಾರನಾಗಿ ಬೆಳೆದಿದ್ದಾರೆ ಎಂದು ದ್ರಾವಿಡ್ ಪ್ರಶಂಸಿಸಿದ್ದಾರೆ. ನಾನು ಗಮನಿಸಿದ ಹಾಗೆ ಪಾಂಡ್ಯರಲ್ಲಿ ಕಂಡುಬಂದಿರುವ ಗಮನಾರ್ಹ ಬದಲಾವಣೆಯೆಂದರೆ, ಆತ ಈಗ ಪರಿಸ್ಥಿತಿಗೆ ತಕ್ಕ ಹಾಗೆ ಆಡಲು ಕಲಿತಿದ್ದಾನೆ. ತನಗಿಷ್ಟ ಬಂದ ಹಾಗೆ ಆಡುವುದಿಲ್ಲ. ಇದು ಆತನನ್ನು ಪರಿಪೂರ್ಣನಾಗಿಸಿದೆ ಎಂದು ದ್ರಾವಿಡ್ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಶಿಷ್ಯನನ್ನು ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ದೈತ್ಯ ಬ್ಯಾಟರ್‌ ಕ್ರೀಸ್‌ ಗೇಲ್ಸ್‌ ಸಿಕ್ಸರ್‌ ದಾಖಲೆಯನ್ನು ಉಡೀಸ್‌ ಮಾಡಿದ ವೈಭವ್‌ ಸೂರ್ಯವಂಶಿ

IPL 2026: ಎಲಿಮಿನೇಟರ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಸನ್‌ರೈಸರ್ಸ್‌: ರಾಯಲ್ಸ್‌ಗೆ ಆರಂಭಿಕ ಆಘಾತ

IPL 2026: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿಗೆ ಮಾಜಿ ಮಾಲೀಕ ವಿಜಯ್‌ ಮಲ್ಯರಿಂದ ವಿಶ್‌

ಅಬ್ ಕೀ ಬಾರ್ ಕೊಹ್ಲಿ ಕೀ ಸರ್ಕಾರ್ ಎಂದ ಫ್ಯಾನ್ಸ್: ವಿರಾಟ್ ಕೊಹ್ಲಿ ರಿಯಾಕ್ಷನ್ ತಪ್ಪದೇ ನೋಡಿ Video

ನಾನೇನೂ ಮಾಡಿಲ್ಲ.. ಬೇಸರದಲ್ಲಿ ಕೂತಿದ್ದ ಟಿಮ್ ಡೇವಿಡ್: ಆರ್ ಸಿಬಿ ಆಟಗಾರರು ಮಾಡಿದ್ದೇನು Video

ಮುಂದಿನ ಸುದ್ದಿ
Show comments