Publish Date: Fri, 22 Jan 2021 (12:20 IST)
Updated Date: Fri, 22 Jan 2021 (12:21 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಮೇಲೆ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು. ಈ ಸಂದರ್ಭದಲ್ಲಿ ಅಂಪಾಯರ್ ಹೇಳಿದ ಮಾತುಗಳನ್ನು ಸಿರಾಜ್ ಬಹಿರಂಗಪಡಿಸಿದ್ದಾರೆ.
ಜನಾಂಗೀಯ ನಿಂದನೆ ಬಳಿಕ ಅಂಪಾಯರ್ ನಮ್ಮ ಬಳಿ ಬೇಕಿದ್ದರೆ ನೀವು ಪಂದ್ಯ ಬಿಟ್ಟು ಹೊರನಡೆಯಬಹುದು ಎಂದಿದ್ದರು. ಆದರೆ ನಾಯಕ ಅಜಿಂಕ್ಯಾ ರೆಹಾನೆ ನಾವ್ಯಾಕೆ ಹೋಗಬೇಕು? ನಾವು ಇಲ್ಲಿ ಆಡಲು ಬಂದಿದ್ದೇವೆ ಎಂದಿದ್ದರು ಎಂದು ಸಿರಾಜ್ ಭಾರತಕ್ಕೆ ಮರಳಿದ ಬಳಿಕ ಮಾಧ್ಯಮಗಳ ಮುಂದೆ ಹೇಳಿದ್ದಾರೆ.