Select Your Language

Notifications

webdunia
webdunia
webdunia
webdunia

ಐಪಿಎಲ್ ಅವಕಾಶ ಸಿಗದ ಬೇಸರಕ್ಕೆ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಕ್ರಿಕೆಟಿಗ

ಐಪಿಎಲ್ ಅವಕಾಶ ಸಿಗದ ಬೇಸರಕ್ಕೆ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಕ್ರಿಕೆಟಿಗ
ಮುಂಬೈ , ಗುರುವಾರ, 13 ಆಗಸ್ಟ್ 2020 (11:13 IST)
ಮುಂಬೈ: ‘ಜ್ಯೂನಿಯರ್ ಸ್ಟೇನ್’ ಎಂದೇ ಖ್ಯಾತರಾಗಿದ್ದ ಮುಂಬೈನ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಅವಕಾಶ ಸಿಗದೇ ಅವರು ಹತಾಶೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.


ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಅವಕಾಶ ಸಿಗಬಹುದು ಎಂದು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಅವಕಾಶ ಸಿಗದೇ ಇದ್ದಿದ್ದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ವಿಶ್ವ ವಿಖ್ಯಾತ ವೇಗಿ ದ.ಆಫ್ರಿಕಾದ ಡೇಲ್ ಸ್ಟೇನ್ ಶೈಲಿಯಲ್ಲೇ ಬೌಲಿಂಗ್ ಮಾಡುತ್ತಿದ್ದ ಕರಣ್ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿ ಗಮನ ಸೆಳೆದಿದ್ದರು. ಆದರೆ ರಾಜ್ಯ ತಂಡವನ್ನು ಪ್ರತಿನಿಧಿಸದೇ ಇರುವುದರಿಂದ ಐಪಿಎಲ್ ಹರಾಜಿಗೆ ಅವರನ್ನು ಪರಿಗಣಿಸಲಾಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಪ್ರಾಯೋಜಕರಿಂದ ಭಾರೀ ಲಾಭ ಪಡೆಯಲು ಯೋಜನೆ ನಡೆಸಿರುವ ಬಿಸಿಸಿಐ