Publish Date: Sat, 19 Aug 2017 (08:24 IST)
Updated Date: Sat, 19 Aug 2017 (08:27 IST)
ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅತಿಯಾಗಿ ಶಿಸ್ತಿನಿಂದ ವರ್ತಿಸುತ್ತಿದ್ದರು ಎಂಬ ಆರೋಪಗಳನ್ನು ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಳ್ಳಿ ಹಾಕಿದ್ದಾರೆ.
ಅವರು ಅತಿಯಾಗಿ ಶಿಸ್ತು ತೋರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕ್ರಿಕೆಟ್ ವಿಷಯಕ್ಕೆ ಬಂದರೆ ಅವರು ಕಟ್ಟುನಿಟ್ಟಾಗಿದ್ದರು. ಆದರೆ ಅತಿ ಎನಿಸುವಷ್ಟು ಶಿಸ್ತು ತೋರುತ್ತಿರಲಿಲ್ಲ. ಕ್ರಿಕೆಟ್ ಹೊರತಾಗಿ ಅವರು ನಮ್ಮ ಬಳಿ ಸ್ನೇಹಿತನಂತೆ ಇದ್ದರು ಎಂದು ಸಹಾ ಅಭಿಪ್ರಾಯಪಟ್ಟಿದ್ದಾರೆ.
ಈ ವೇಳೆ ಕುಂಬ್ಳೆ ಮತ್ತು ರವಿ ಶಾಸ್ತ್ರಿ ಕೋಚಿಂಗ್ ಶೈಲಿಯಲ್ಲಿ ವ್ಯತ್ಯಾಸವೇನು ಎಂದು ಕೇಳಿದ್ದಕ್ಕೆ ‘ಅನಿಲ್ ಭಾಯ್ ಯಾವಾಗಲೂ ನಾವು 400-500 ರನ್ ಕಲೆ ಹಾಕಬೇಕು. ಎದುರಾಳಿಯನ್ನು 150-200 ರನ್ ಒಳಗೆ ಕಟ್ಟಿ ಹಾಕಬೇಕೆಂದು ನಿರೀಕ್ಷಿಸುತ್ತಿದ್ದರು.
ಆದರೆ ರವಿಶಾಸ್ತ್ರಿ ಹಾಗಲ್ಲ. ಅವರು ಮೈದಾನಕ್ಕೆ ಇಳಿದ ಮೇಲೆ ಪ್ರತೀ ಬಾಲ್ ನ್ನು ಮೈದಾನದಿಂದ ಆಚೆ ಅಟ್ಟಿ, ಆಕ್ರಮಣಕಾರಿಯಾಗಿರಿ ಎನ್ನುತ್ತಾರೆ. ಅದರ ಹೊರತಾಗಿ ಇಬ್ಬರೂ ನಮ್ಮಲ್ಲಿ ಸಕಾರಾತ್ಮಕ ಅಂಶ ತುಂಬುತ್ತಾರೆ’ ಎಂದು ಸಹಾ ಅಭಿಪ್ರಾಯಪಟ್ಟಿದ್ದಾರೆ.