Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆಗಾಗಿ ಜೀವವೇ ಕೊಡಲು ಸಿದ್ಧ ಎಂದು ಗೌತಮ್ ಗಂಭೀರ್ ಹೇಳಿದ್ದೇಕೆ?

ಅನಿಲ್ ಕುಂಬ್ಳೆಗಾಗಿ ಜೀವವೇ ಕೊಡಲು ಸಿದ್ಧ ಎಂದು ಗೌತಮ್ ಗಂಭೀರ್ ಹೇಳಿದ್ದೇಕೆ?
ಮುಂಬೈ , ಸೋಮವಾರ, 4 ಮೇ 2020 (09:16 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಕೋಚ್ ಆಗಿದ್ದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮೇಲೆ ತಮಗೆಷ್ಟು ಗೌರವವಿದೆ ಎಂಬುದನ್ನು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸಂದರ್ಶನವೊಂದರಲ್ಲಿ ಹೊರ ಹಾಕಿದ್ದಾರೆ.


ಭಾರತ ತಂಡದಲ್ಲಿ ಹಲವರ ನಾಯಕತ್ವದಲ್ಲಿ ಆಡಿದ್ದೇನೆ. ಆದರೆ ಅನಿಲ್ ಕುಂಬ್ಳೆಯಂತೆ ನನಗೆ ಬೆಂಬಲ ನೀಡಿದವರು ಯಾರೂ ಇಲ್ಲ. ಒಂದು ವೇಳೆ ಯಾರಿಗಾದರೂ ನನ್ನ ಪ್ರಾಣ ದಾನ ಮಾಡಬೇಕೆಂದರೆ ಅದು ಅನಿಲ್ ಕುಂಬ್ಳೆಗೆ ಎಂದು ಗಂಭೀರ್ ಹೇಳಿದ್ದಾರೆ.

ಅಷ್ಟೇ ಅಲ್ಲ, ಕುಂಬ್ಳೆ ಕಾಲದಲ್ಲಿ ಡಿಆರ್ ಎಸ್ ನಿಯಮವೇನಾದರೂ ಜಾರಿಯಲ್ಲಿದ್ದಿದ್ದರೆ ಇಷ್ಟೊತ್ತಿಗೆ ಅವರು 900 ವಿಕೆಟ್ ಕಬಳಿಸುತ್ತಿದ್ದರು ಎಂದೂ ಗಂಭೀರ್ ಮಾಜಿ ನಾಯಕನ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬಳಿಯಿರುವ ನಾಯಿಗಳ ಬಗ್ಗೆ ನಿಮಗೆಷ್ಟು ಗೊತ್ತು?