Select Your Language

Notifications

webdunia
webdunia
webdunia
webdunia

ಕೊರೋನಾ ಭಯದಲ್ಲಿರುವ ಚೆನ್ನೈ ತಂಡಕ್ಕೆ ಭರವಸೆ ನೀಡಿದ ಧೋನಿ

ಕೊರೋನಾ ಭಯದಲ್ಲಿರುವ ಚೆನ್ನೈ ತಂಡಕ್ಕೆ ಭರವಸೆ ನೀಡಿದ ಧೋನಿ
ದುಬೈ , ಸೋಮವಾರ, 31 ಆಗಸ್ಟ್ 2020 (12:51 IST)
ದುಬೈ: ಐಪಿಎಲ್ ನಲ್ಲಿ ಪಾಲ್ಗೊಳ್ಳಲು ತೆರಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈಗ ಕೊರೋನಾ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ಸುರೇಶ್ ರೈನಾ ಟೂರ್ನಿಯಿಂದ ಹೊರನಡೆದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಧೋನಿ ಆಟಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರಂತೆ.

 
ಧೋನಿ ಆಟಗಾರರಿಗೆ ಮಾತ್ರವಲ್ಲ, ಫ್ರಾಂಚೈಸಿ ಮಾಲಿಕರಿಗೂ ಅಭಯ ನೀಡಿದ್ದಾರಂತೆ. ಇನ್ನಷ್ಟು ಜನ ಕೊರೋನಾ ಪೀಡಿತರಾದರೂ ಅದಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಧೋನಿ ಭರವಸೆ ನೀಡಿದ್ದಾರೆ ಎಂದು ಚೆನ್ನೈ ಮಾಲಿಕ ಶ್ರೀನಿವಾಸನ್ ಹೇಳಿದ್ದಾರೆ.

‘ನಮಗೆ ಉತ್ತಮ ನಾಯಕ ದೊರೆತಿದ್ದಾರೆ. ಅವರು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಚೆನ್ನೈ ತಂಡ ಒಂದು ಕುಟುಂಬದಂತೆ ಇದೆ. ಇಲ್ಲಿ ಯಾರನ್ನೂ ನಾವು ಬಲವಂತವಾಗಿ ಹಿಡಿದಿಟ್ಟುಕೊಳ್ಳಲಾಗದು. ರೈನಾ ವಿಚಾರದಲ್ಲೂ ಅದೇ ರೀತಿ ಆಗಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಗೂಢವಾಗಿದೆ ಸುರೇಶ್ ರೈನಾ ವಾಪಸಾತಿ! ಧೋನಿ ಜತೆ ವೈಮನಸ್ಯ?