ಮೊನ್ನೆಯಷ್ಟೇ ಬಾಲಿಶ ಎಂದು ಕರೆದವರು ಇಂದು ವಿರಾಟ್ ಕೊಹ್ಲಿಯನ್ನು ಮಿ.ಪರ್ಫೆಕ್ಟ್ ಕ್ಯಾಪ್ಟನ್ ಎಂದರು!

Webdunia
ಭಾನುವಾರ, 18 ಫೆಬ್ರವರಿ 2018 (09:17 IST)
ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಾಗ ವಿರಾಟ್ ಕೊಹ್ಲಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡವರೆಲ್ಲಾ ಇದೀಗ ಏಕದಿನ ಸರಣಿ ಗೆದ್ದಾಗ ಮಿ.ಪರ್ಫೆಕ್ಟ್, ವಿಶ್ವದ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡುತ್ತಿದ್ದಾರೆ. ಇದರಿಂದಾಗಿಯೇ ಮಾಜಿ ಕ್ರಿಕೆಟಿಗರು ಬೆಲೆ ಕಳೆದುಕೊಳ್ಳುತ್ತಿದ್ದಾರೆ.
 

ಟೆಸ್ಟ್ ಸರಣಿ ಸೋತಾಗ ವೀರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸುವವರು ಯಾರೂ ಇಲ್ಲ. ಅದಕ್ಕೆ ಬೇಕಾಬಿಟ್ಟಿ ತಂಡದ ಆಯ್ಕೆ ಮಾಡುತ್ತಿದ್ದಾರೆ. ಒಂದು ವೇಳೆ ತಾವು ಒಂದು ಪಂದ್ಯದಲ್ಲಿ ಪ್ರದರ್ಶನ ನೀಡಿಲ್ಲವೆಂದರೆ ತಾವೂ ಹೊರಗುಳಿಯುತ್ತಾರಾ ಎಂದೆಲ್ಲಾ ಜರೆದಿದ್ದರು.

ಇದೀಗ ಏಕದಿನ ಸರಣಿ ಗೆಲ್ಲುತ್ತಿದ್ದಂತೆ ಸೆಹ್ವಾಗ್ ವರಸೆಯೇ ಬದಲಾಗಿದೆ. ಸರಣಿಯಲ್ಲಿ ಮೂರು ಶತಕ ಸಿಡಿಸಿದ್ದಲ್ಲದೆ, ತಂಡಕ್ಕೆ ಭರ್ಜರಿ ಜಯ ದೊರಕಿಸಿಕೊಡುತ್ತಿದ್ದಂತೆ ಕೊಹ್ಲಿಯನ್ನು ವಿಶ್ವ ಶ್ರೇಷ್ಠ ನಾಯಕ ಎಂದು ಕೊಂಡಾಡಿದ್ದಾರೆ. ಹಾಗಿದ್ದರೆ ಒಂದೇ ತಿಂಗಳ ಅವಧಿಗೆ ಕೊಹ್ಲಿ ವಿಶ್ವಶ್ರೇಷ್ಠ ನಾಯಕರಾದರೇ? ಒಂದು ಸರಣಿ ಗೆಲುವಿನಿಂದ ಹುಳುಕಗಳೆಲ್ಲಾ ಮುಚ್ಚಿ ಹೋಯ್ತೇ?

ಸೆಹ್ವಾಗ್ ರೀತಿಯೇ ಹಲವು ದೇಶ, ವಿದೇಶದ ಮಾಜಿ ಕ್ರಿಕೆಟಿಗರೂ ಕೊಹ್ಲಿ ನಾಯಕತ್ವವನ್ನು ಟೀಕಿಸಿದವರೂ ಇಂದು ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ. ಸೋಲು ಗೆಲುವೆಂಬುದು ಆಟದಲ್ಲಿ ಸಾಮಾನ್ಯ. ಆದರೆ ಆಟದಲ್ಲಿ ತಜ್ಞರೆನಿಸಿಕೊಂಡವರೇ ಈ ರೀತಿ ಸೋತಾಗ ಆಳಿಗೊಂದು ಕಲ್ಲು ಎಂಬಂತೆ ಗೆದ್ದಾಗ ಹೊಗಳಿ ಅಟ್ಟಕ್ಕೇರಿಸಿದರೆ ತಪ್ಪು ದಾರಿಗೆಳೆದಂತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೋಗು ಬೌಲಿಂಗ್ ಮಾಡು, ಕಣ್‌ ಸನ್ನೆಯಲ್ಲೇ ಕುಲ್‌ದೀಪ್‌ಗೆ ಗದರಿದ ರೋಹಿತ್, ಎಲ್ಲರಿಗೂ ನಗುವೋ ನಗು

IND VS SA: ಟಾಸ್ ಸೋತರು ಭಾರತಕ್ಕೆ ಸವಾಲಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

IND vs SA: ಕೆಎಲ್ ರಾಹುಲ್ ಇಂದು ಟಾಸ್ ಗೆದ್ದಿದ್ದು ಹೇಗೆ, ಇಲ್ಲಿದೆ ರೋಚಕ ಕಹಾನಿ video

ಬೆಳಗಾವಿ ಅಧಿವೇಶನದಲ್ಲಿ ಈ ಒಂದು ವಿಚಾರ ಚರ್ಚೆಯಾಗಬೇಕು ಎಂದ ವಿಜಯೇಂದ್ರ

IND vs SA: ರನ್ ಗಾಗಿ ಪರದಾಡುತ್ತಿದ್ದ ಆಫ್ರಿಕಾ ಕಷ್ಟ ನಿವಾರಿಸಿದ ರನ್ ಮೆಷಿನ್ ಪ್ರಸಿದ್ಧ ಕೃಷ್ಣ

ಮುಂದಿನ ಸುದ್ದಿ
Show comments