Select Your Language

Notifications

webdunia
webdunia
webdunia
webdunia

ಅಂಬಟಿ ರಾಯುಡು ನಿವೃತ್ತಿ: ವಿರಾಟ್ ಕೊಹ್ಲಿ ಮೇಲೆ ಗೂಬೆ ಕೂರಿಸಿದ ಅಭಿಮಾನಿಗಳು

ಅಂಬಟಿ ರಾಯುಡು ನಿವೃತ್ತಿ: ವಿರಾಟ್ ಕೊಹ್ಲಿ ಮೇಲೆ ಗೂಬೆ ಕೂರಿಸಿದ ಅಭಿಮಾನಿಗಳು
ಮುಂಬೈ , ಗುರುವಾರ, 4 ಜುಲೈ 2019 (09:12 IST)
ಮುಂಬೈ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದ ಅಂಬಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.


ಆದರೆ ಅಂಬಟಿ ರಾಯುಡು ನಿವೃತ್ತಿ ಘೋಷಿಸಿದ ಸುದ್ದಿ ತಿಳಿಯುತ್ತಿದ್ದಂತೇ ಕ್ರಿಕೆಟ್ ಪ್ರೇಮಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಆದರೆ ಅಂಬಟಿ ರಾಯುಡು ಮಾತ್ರ ಬಿಸಿಸಿಐಗೆ ಬರೆದ ನಿವೃತ್ತಿ ಪತ್ರದಲ್ಲಿ ತಮ್ಮ ಮೇಲೆ ನಾಯಕ ಕೊಹ್ಲಿಗೆ ಅಪಾರ ವಿಶ್ವಾಸವಿರಿಸಿದ್ದರು ಎಂದು ಧನ್ಯವಾದ ಸಲ್ಲಿಸಿದ್ದಾರೆ.

ಅಂಬಟಿ ರಾಯುಡುರನ್ನು ಕೊಹ್ಲಿ ಕಡೆಗಣಿಸಿದರು. ಶಿಖರ್ ಧವನ್, ವಿಜಯ್ ಶಂಕರ್ ಗಾಯಗೊಂಡು ವಿಶ್ವಕಪ್ ತಂಡದಿಂದ ಹೊರಬಿದ್ದಾಗಲಾದರೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು. ಅದನ್ನೂ ಮಾಡದೆ ಕೊಹ್ಲಿ ರಾಯುಡು ನಿವೃತ್ತಿಗೆ ಕಾರಣರಾದರು ಎಂಬರ್ಥದಲ್ಲಿ ಅಭಿಮಾನಿಗಳು ಟ್ವಿಟರ್ ನಲ್ಲಿ ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ 2019 ರ ಟೀಂ ಇಂಡಿಯಾದ ಕೊನೆಯ ಪಂದ್ಯ ಧೋನಿ ಪಾಲಿಗೆ ಅಂತಿಮ ಪಂದ್ಯ?!