Select Your Language

Notifications

webdunia
webdunia
webdunia
webdunia

ಮತ್ತೆ ಮೈದಾನದಲ್ಲಿ ವಾಂತಿ ಮಾಡಿಕೊಂಡ ಲಂಕಾ ಕ್ರಿಕೆಟಿಗ

ಭಾರತ-ಶ್ರೀಲಂಕಾ ಟೆಸ್ಟ್ ಸರಣಿ
ದೆಹಲಿ , ಮಂಗಳವಾರ, 5 ಡಿಸೆಂಬರ್ 2017 (16:50 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವಾಯು ಮಾಲಿನ್ಯದ ಪರಿಣಾಮ ಲಂಕಾ ಕ್ರಿಕೆಟಿಗರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಇಂದೂ ಕೂಡಾ ಅದು ಮುಂದುವರಿಯಿತು.
 

ಭಾನುವಾರ ಫೀಲ್ಡಿಂಗ್ ಮಾಡುತ್ತಿದ್ದಾಗ ಲಂಕಾ ಸುಮಾರು 20 ನಿಮಿಷಗಳ ಕಾಲ ಆಟ ನಿಲ್ಲಿಸಿತು.  ಆಟಗಾರರು ಮಾಸ್ಕ್ ಹಾಕಿಕೊಂಡು ಆಡುತ್ತಿದ್ದರು. ಇಂದು ಮತ್ತೆ ಫೀಲ್ಡಿಂಗ್ ಮಾಡಲು ಇಳಿದ ಲಂಕಾ ಕ್ರಿಕೆಟಿಗರು ಮತ್ತೆ ಉಸಿರಾಟದ ಸಮಸ್ಯೆ ಎದುರಿಸಿದರು.

ಮೊನ್ನೆ ಮೈದಾನದಲ್ಲಿ ವಾಂತಿ ಮಾಡಿಕೊಂಡಿದ್ದ ಲಕ್ಮಲ್ ಇಂದು ಮತ್ತೆ ಓವರ್ ನಡುವೆ ಬಳಲಿದವರಂತಾಗಿ ವಾಂತಿ ಮಾಡಿಕೊಂಡರು. ಏನೇ ಆದರೂ ದೆಹಲಿ ವಾಯು ಮಾಲಿನ್ಯದಿಂದಾಗಿ ಬಿಸಿಸಿಐ ವ್ಯಾಪಕ ಟೀಕೆಗೆ ಗುರಿಯಾಗಿರುವುದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಕ್ರಿಕೆಟ್ ಪೆವಿಲಿಯನ್ ನಲ್ಲಿ ತಳಮಳ