Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕುಡುಕ ಸಹಆಟಗಾರನಿಂದಾಗಿ ಸಾವಿನ ದವಡೆಗೆ ತಲುಪಿದ್ದ ಯಜುವೇಂದ್ರ ಚಾಹಲ್!

ಬೆಂಗಳೂರಿನಲ್ಲಿ ಕುಡುಕ ಸಹಆಟಗಾರನಿಂದಾಗಿ ಸಾವಿನ ದವಡೆಗೆ ತಲುಪಿದ್ದ ಯಜುವೇಂದ್ರ ಚಾಹಲ್!
ಮುಂಬೈ , ಶುಕ್ರವಾರ, 8 ಏಪ್ರಿಲ್ 2022 (11:02 IST)
ಮುಂಬೈ: ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ ಆಡುವ ಕ್ರಿಕೆಟಿಗ ಯಜುವೇಂದ್ರ ಚಾಹಲ್ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿದ್ದಾಗ ನಡೆದ ಆತಂಕಕಾರೀ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ರವಿಚಂದ್ರನ್ ಅಶ್ವಿನ್ ಜೊತೆಗೆ ಚಿಟ್ ಚ್ಯಾಟ್ ವೇಳೆ ಚಾಹಲ್ ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ನಡೆದಿದ್ದ  ಈಘಟನೆಯನ್ನು ನಾನು ಇದುವರೆಗೆ ಯಾರಿಗೂ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.

‘ಬೆಂಗಳೂರಿನಲ್ಲಿ ಪಂದ್ಯವಿತ್ತು. ಆಗ ನಾನು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದೆ. ಪಂದ್ಯದ ಬಳಿಕ ಪಾರ್ಟಿ ವೇಳೆ ಸಹ ಆಟಗಾರನೊಬ್ಬ ಕುಡಿದ ಮತ್ತಿನಲ್ಲಿ ನನ್ನನ್ನು ಹೋಟೆಲ್ ನ 15 ನೇ ಮಹಡಿಯಿಂದ ನೇತು ಹಾಕಿದ್ದ. ನನಗೆ ತೀರಾ ಭಯವಾಗಿ ತಲೆಸುತ್ತು ಬಂದು ಬೀಳುವವನಿದ್ದೆ. ಆಗ ಉಳಿದ ಆಟಗಾರರು ನನ್ನನ್ನು ರಕ್ಷಿಸಿ ರೂಂಗೆ ಕರೆದೊಯ್ದರು’ ಎಂದು ಚಾಹಲ್ ಹೇಳಿದ್ದಾರೆ. ಆದರೆ ಆ ರೀತಿ ಮಾಡಿದ ಆಟಗಾರನ ಹೆಸರು ಬಹಿರಂಗಪಡಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಜೊತೆಗೆ ರಿಷಬ್ ಪಂತ್ ಗೆ ದಂಡದ ಬರೆ