ಡಬ್ಲ್ಯುಪಿಎಲ್: ಆರ್ ಸಿಬಿಗೆ ಸೋಲೇ ಎಲ್ಲಾ, ಗೆಲುವೇ ಇಲ್ಲ

Webdunia
ಶನಿವಾರ, 11 ಮಾರ್ಚ್ 2023 (08:20 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಕೂಟದ ಅತ್ಯಂತ ಅದೃಷ್ಟಹೀನ ತಂಡವೆಂದರೆ ಬಹುಶಃ ಆರ್ ಸಿಬಿ ಇರಬೇಕು. ಇದುವರೆಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಆರ್ ಸಿಬಿಗೆ ಸಾಧ್ಯವಾಗಿಲ್ಲ.

ನಿನ್ನೆ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯವನ್ನೂ ಆರ್ ಸಿಬಿ 10 ವಿಕೆಟ್ ಗಳಿಂದ ಹೀನಾಯವಾಗಿ ಸೋತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧನಾ ಪಡೆ ಕೇವಲ 138 ರನ್ ಗಳಿಗೆ ಆಲೌಟ್ ಆಗಿತ್ತು.

ಈ ಮೊತ್ತವನ್ನು ಬೆನ್ನತ್ತಿದ ಯುಪಿ ವಾರಿಯರ್ಸ್ 13 ಓವರ್ ಗಳಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು. ಯುಪಿ ಪರ ಬಿರುಸಿನ ಇನಿಂಗ್ಸ್ ಆಡಿದ ಅಲೆಸಾ ಹೀಲೇ ಕೇವಲ 47 ಎಸೆತಗಳಿಂದ ಅಜೇಯ 96 ರನ್ ಸಿಡಿಸಿದರು. ಇನ್ನು ನಾಲ್ಕು ರನ್ ಗಳಿಸಿದ್ದರೂ ಅವರು ಡಬ್ಲ್ಯುಪಿಎಲ್ ಕೂಟದ ಮೊದಲ ಶತಕದ ದಾಖಲೆ ಮಾಡುತ್ತಿದ್ದರು. ಅವರಿಗೆ ತಕ್ಕ ಸಾಥ್ ನೀಡಿದ ದೇವಿಕಾ ವೈದ್ಯ ಅಜೇಯ 36 ರನ್ ಗಳಿಸಿದರು. ಇದರೊಂದಿಗೆ ಆರ್ ಸಿಬಿ ನಾಲ್ಕನೇ ಸೋಲು ಅನುಭವಿಸಿತು. ಇದುವರೆಗೆ ಗೆಲುವಿನ ಖಾತೆ ತೆರೆಯದ ಸ್ಮೃತಿ ಮಂಧನಾ ಪಡೆ ತೀವ್ರ ನಿರಾಸೆ ಅನುಭವಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS END ODI: ಗಿಲ್‌ ಅಬ್ಬರ, ಅಕ್ಷರ್‌ ಆಲ್‌ರೌಂಡ್‌ ಆಟ: ಇಂಗ್ಲೆಂಡ್‌ ನೆಲದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದ ಭಾರತ

ಎಡ್ಜ್‌ಬಾಸ್ಟನ್‌ನಲ್ಲಿ ಏಕದಿನ ಪಂದ್ಯದ ವೇಳೆ ಹೃದಯಸ್ಪರ್ಶಿ ಸನ್ನೆಯಿಂದ ಎಲ್ಲರ ಹೃದಯ ಗೆದ್ದ ಎಂಎಸ್ ಧೋನಿ

IND VS ENG: ಭಾರತಕ್ಕೆ ಇಂಗ್ಲೆಂಡ್‌ ಕಠಿಣ ಸವಾಲು: ನಿರಾಸೆ ಮೂಡಿಸಿದ ರೋ–ಕೊ ಜೋಡಿ

IND vs ENG: ಈ ಲೈನ್ ಚೆನ್ನಾಗಿದೆ ಮಗಾ.. ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ ಕನ್ನಡ ಕಲರವ Video

ಫಿಫಾ ವಿಶ್ವಕಪ್‌ 2026: ಈ ದಿನದಂದು ಬೆಂಗಳೂರಿನ ಹೊಟೇಲ್‌, ರೆಸ್ಟೋರೆಂಟ್‌ಗಳ ಸೇವೆ ಸಮಯದಲ್ಲಿ ಬದಲಾವಣೆ

ಮುಂದಿನ ಸುದ್ದಿ
Show comments