Select Your Language

Notifications

webdunia
webdunia
webdunia
webdunia

ಮಹೇಂದ್ರ ಸಿಂಗ್‌ ದೋನಿ ಬ್ಯಾಡ್ಮಿಂಟನ್‌ ಆಟಗಾರ ಶ್ರೀಕಾಂತ್‌ ಗೆ ನೀಡಿದ ಉಡುಗೊರೆ ಏನು....?

ದೋನಿ
ನವದೆಹಲಿ , ಸೋಮವಾರ, 21 ಮೇ 2018 (12:18 IST)
ನವದೆಹಲಿ: ಬಿಸಿಸಿಐನ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅವರು ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್‌ ಅವರಿಗೆ ಮಹೇಂದ್ರ ಸಿಂಗ್‌ ದೋನಿ ಅವರು ಸಹಿ ಮಾಡಿದ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿರುವ ಪುಲ್ಲೇಲ ಗೋಪಿಚಂದ್‌ ಅವರ ಅಕಾಡೆಮಿಗೆ ತೆರಳಿದ ಪ್ರಸಾದ್‌ ಅವರು ಶ್ರೀಕಾಂತ್‌ ಅವರಿಗೆ ಈ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.


‘ಶ್ರೀಕಾಂತ್‌ ಅವರು ದೋನಿ ಅವರ ದೊಡ್ಡ ಅಭಿಮಾನಿ. ಒಂದು ದಿನ ನನ್ನನ್ನು ಭೇಟಿ ಮಾಡಿದ್ದ ಶ್ರೀಕಾಂತ್ ಅವರು ದೋನಿಯಿಂದ ಉಡುಗೊರೆ ಪಡೆಯುವ ಆಸೆ ಇದೆ ಎಂದು ಹೇಳಿದ್ದರು. ಆಗ, ಬ್ಯಾಡ್ಮಿಂಟನ್‌ನಲ್ಲಿ ಅಮೋಘ ಸಾಧನೆ ಮಾಡಿದರೆ ಮಾತ್ರ ನಿಮ್ಮ ಆಸೆಯನ್ನು ಪೂರೈಸುತ್ತೇನೆ ಎಂದು ಅವರಿಗೆ ಹೇಳಿದ್ದೆ’ ಎಂದು ತಿಳಿಸಿದ್ದಾರೆ. ‘ಶ್ರೀಕಾಂತ್‌ ಅವರ ಆಸೆಯ ಬಗ್ಗೆ ದೋನಿ ಅವರಿಗೆ ಹೇಳಿದೆ. ಆಗ ದೋನಿ ತಮ್ಮ ಸಹಿ ಇರುವ ಬ್ಯಾಟ್‌ ಆನ್ನು ಶ್ರೀಕಾಂತ್‌ ಗೆ ನೀಡಲು ಸಂತಸದಿಂದ ಒಪ್ಪಿದ್ದರು’ ಎಂದು ಪ್ರಸಾದ್ ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರೋಧದ ಹಿನ್ನೆಲೆ ಸ್ಕೋರಿಂಗ್ ಯೋಜನೆ ಕೈಬಿಟ್ಟ ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ