Select Your Language

Notifications

webdunia
webdunia
webdunia
webdunia

Virat Kohli: ಟ್ರೋಫಿ ಗೆದ್ದಾಗ ಕೊಹ್ಲಿಗೆ ಕಣ್ಣೀರು ಬಂತು, ಅಭಿಮಾನಿ ಸತ್ತಾಗ ಬರಲಿಲ್ಲ ಯಾಕೆ

Virat Kohli

Krishnaveni K

ಬೆಂಗಳೂರು , ಗುರುವಾರ, 5 ಜೂನ್ 2025 (20:39 IST)
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಫಿ ಗೆದ್ದಾಗ ಕಣ್ಣೀರು ಬಂತು, ಅಭಿಮಾನಿಗಳು ಸತ್ತಾಗ ಯಾಕೆ ಬರಲಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಈಗ ಅರೆಸ್ಟ್ ಕೊಹ್ಲಿ ಟ್ರೆಂಡ್ ಆಗುತ್ತಿದೆ. ಈ ಹಿಂದೆ ಅಲ್ಲಿ ಅರ್ಜುನ್ ಬಂದಾಗ ಕಾಲ್ತುಳಿತವಾಗಿದ್ದಕ್ಕೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈಗ ಕೊಹ್ಲಿಯನ್ನು ನೋಡಲು ಜನಸಾಗರ ಬಂದು ಕಾಲ್ತುಳಿತವಾಗಿದೆ. ಹೀಗಾಗಿ ಅವರನ್ನು ಅರೆಸ್ಟ್ ಮಾಡಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇನ್ನು ಕೆಲವರು ಆರ್ ಸಿಬಿ-ಸಿಎಸ್ ಕೆ ಪಂದ್ಯದ ವೇಳೆ ಮಾರಾಟವಾಗಿದ್ದ ಬ್ಲ್ಯಾಕ್ ಆಂಡ್ ವೈಟ್ ಜರ್ಸಿಯನ್ನು ಪ್ರಕಟಿಸಿ ಅಂದಿನ ಕರ್ಮಕ್ಕೆ ಈಗ ಆರ್ ಸಿಬಿ ಫ್ಯಾನ್ಸ್ ತಿರುಗೇಟು ಪಡೆದಿದ್ದಾರೆ ಎಂದಿದ್ದಾರೆ.

ಮತ್ತೆ ಕೆಲವರು ಆರ್ ಸಿಬಿಯನ್ನು ಕ್ರಿಮಿನಲ್ ಎಂದಿದ್ದು ಇಂತಹ ಘಟನೆಗೆ ಕಾರಣವಾಗಿದ್ದಕ್ಕೆ ನಾಚಿಕೆಯಾಗಬೇಕು ಎಂದು ಟ್ರೋಲ್ ಮಾಡಿದ್ದಾರೆ. ಜನರ ಪ್ರಾಣ ಅಪಾಯಕ್ಕೆ ದೂಡಿ ಇಂತಹದ್ದೊಂದು ರೋಡ್ ಶೋ ಅಗತ್ಯವಿತ್ತಾ ಎಂದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

Gautam Gambhir: ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಗೌತಮ್ ಗಂಭೀರ್ ಮಹತ್ವದ ಹೇಳಿಕೆ