Select Your Language

Notifications

webdunia
webdunia
webdunia
webdunia

ಯುವ ಆಟಗಾರರಿಗೆ ಅನಿಲ್ ಕುಂಬ್ಳೆಯಿಂದಾಗಿ ಭಯವಿತ್ತು ಎಂದಿದ್ದ ವಿರಾಟ್ ಕೊಹ್ಲಿ

ಯುವ ಆಟಗಾರರಿಗೆ ಅನಿಲ್ ಕುಂಬ್ಳೆಯಿಂದಾಗಿ ಭಯವಿತ್ತು ಎಂದಿದ್ದ ವಿರಾಟ್ ಕೊಹ್ಲಿ
ಮುಂಬೈ , ಮಂಗಳವಾರ, 5 ಏಪ್ರಿಲ್ 2022 (11:32 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕರಾಗಿದ್ದ ವಿರಾಟ್ ಕೊಹ್ಲಿ ನಡುವೆ ವೈಮನಸ್ಯವಾಗಿ ಕೊನೆಗೆ ಕುಂಬ್ಳೆ ತಂಡದಿಂದ ಹೊರನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.

 ಈ ಘಟನೆ ಬಗ್ಗೆ ಬಿಸಿಸಿಐ ಸಿಇಒ ಆಗಿದ್ದ ವಿನೋದ್ ರಾಯ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆಗ ಅನಿಲ್ ಕುಂಬ್ಳೆ ಕಾರ್ಯವೈಖರಿ ಬಗ್ಗೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ.

‘ಅನಿಲ್ ಕುಂಬ್ಳೆ ವಿಪರೀತ ಶಿಸ್ತಿನ ಮನುಷ್ಯರಾಗಿದ್ದರು. ಅವರ ಈ ಶಿಸ್ತಿನಿಂದಾಗಿ ಯುವ ಆಟಗಾರರಿಗೆ ಒಂದು ರೀತಿ ಭಯವಿತ್ತು. ಹೀಗಾಗಿ ತಂಡದ ಆಟಗಾರರು ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಕೊಹ್ಲಿ ಹೇಳಿದ್ದರು ಎಂದು ವಿನೋದ್ ರಾಯ್ ಪುಸ್ತಕದಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಆರ್ ಸಿಬಿ ಪರ ಇಂದೂ ಆಡಲ್ಲ ಮ್ಯಾಕ್ಸ್ ವೆಲ್