ರನ್ ಗಳಿಸದೇ ತಂಡದಿಂದ ಕಿತ್ತು ಹಾಕಿದ್ದಕ್ಕೆ ಗಳ ಗಳನೆ ಅತ್ತಿದ್ದ ಕೊಹ್ಲಿ

Webdunia
ಶುಕ್ರವಾರ, 10 ಜೂನ್ 2022 (09:00 IST)
ಮುಂಬೈ: ವಿರಾಟ್ ಕೊಹ್ಲಿ ಇಂದು ವಿಶ್ವದ ಘಟಾನುಘಟಿ ಬ್ಯಾಟಿಗನಾಗಿರಬಹುದು. ಆದರೆ ಒಂದು ಕಾಲದಲ್ಲಿ ರನ್ ಗಳಿಸದೇ ಇದ್ದಾಗ ತಂಡದಿಂದ ಕಿತ್ತು ಹಾಕಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ!

ಇಂದು ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವದಿಂದ ಎದುರಾಳಿಗಳನ್ನು ಕೆಣಕುವ ಕೊಹ್ಲಿ ಹಿಂದೆ ಭಾವನಾತ್ಮಕವಾಗಿ ಎಷ್ಟು ದುರ್ಬಲರಾಗಿದ್ದರು ಎಂಬುದನ್ನು ಅವರ ಅಂಡರ್ 17 ಸಹ ಆಟಗಾರ ಪ್ರದೀಪ್ ಸಾಂಗ್ವನ್ ಬಹಿರಂಗಪಡಿಸಿದ್ದಾರೆ.

ಹಿಂದೊಮ್ಮೆ ಪಂಜಾಬ್ ನಲ್ಲಿ ಅಂಡರ್ 17 ಪರ ಆಡುತ್ತಿದ್ದಾಗ ಕೊಹ್ಲಿಯನ್ನು ಎರಡು ಇನಿಂಗ್ಸ್ ಗಳಲ್ಲಿ ರನ್ ಗಳಿಸಲಿಲ್ಲ ಎಂಬ ಕಾರಣಕ್ಕೆ ಅಂದಿನ ಕೋಚ್ ಪ್ರಾಂಕ್ ಮಾಡಲು ಬೇಕೆಂದೇ ಮುಂದಿನ ಪಂದ್ಯದ ಆಡುವ ಬಳಗದಿಂದ ಕೊಹ್ಲಿಯ ಹೆಸರು ಕೈ ಬಿಟ್ಟಿದ್ದರಂತೆ.

ಇದರಿಂದ ಕೊಹ್ಲಿ ಎಷ್ಟು ಆಘಾತಕ್ಕೊಳಗಾದರು ಎಂದರೆ ಕೊಠಡಿಗೆ ಹೋಗಿ ಮನಸಾರೆ ಅತ್ತಿದ್ದಲ್ಲದೆ, ತಮ್ಮ ಬಾಲ್ಯದ ಕೋಚ್ ರಾಜ್ ಕುಮಾರ್ ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರಂತೆ. ಅಲ್ಲದೆ ಪ್ರದೀಪ್ ಬಳಿ ಬಂದು ಇದು ಅನ್ಯಾಯ ಅಲ್ವಾ ಎಂದು ಬೇಸರ ಹೊರಹಾಕಿದ್ದರಂತೆ. ನಾನು ಆಡದೇ ಇದ್ದರೆ ನಿದ್ರೆಯೂ ಮಾಡಲ್ಲ ಎಂದು ಹಠ ಹಿಡಿದರಂತೆ. ಆಗ ಪ್ರದೀಪ್ ಇದೆಲ್ಲಾ ಪ್ರಾಂಕ್ ಆಗಿತ್ತು, ನೀನು ಮುಂದಿನ ಪಂದ್ಯದಲ್ಲಿ ಆಡುತ್ತಿದ್ದೀಯಾ ಎಂದು ಸಮಾಧಾನಿಸಿದರಂತೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

ಮುಂದಿನ ಸುದ್ದಿ
Show comments