Webdunia - Bharat's app for daily news and videos

Install App

ಟೀಂ ಇಂಡಿಯಾದಲ್ಲಿದ್ದವರು 11 ಮಂದಿಯಾದರೂ ಆಡಿದ್ದು ಮೂವರೇ!

Webdunia
ಭಾನುವಾರ, 5 ಆಗಸ್ಟ್ 2018 (09:15 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 11 ಮಂದಿಯೊಂದಿಗೆ ಕಣಕ್ಕಿಳಿಯಿತಾದರೂ ಆಡಿದ್ದು ಮೂರೇ ಮಂದಿ.

ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರ ಸಾಧನೆ ಸೊನ್ನೆ. ಒಂದು ವೇಳೆ ವಿರಾಟ್ ಕೊಹ್ಲಿ ತಂಡದಲ್ಲಿ ಇರದೇ ಹೋಗಿರುತ್ತಿದ್ದರೆ ಟೀಂ ಇಂಡಿಯಾದ ಮಾನ ಎಷ್ಟು ಕಾಸಿಗೆ ಹರಾಜಾಗುತ್ತಿತ್ತು ನೋಡಿ. ಬೌಲಿಂಗ್ ನಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಪಡೆದುಕೊಂಡಿದ್ದ ಅಷ್ಟೂ ಅನುಭವವನ್ನು ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಧಾರೆಯೆರೆದಿದ್ದರು. ಆದರೆ ಬ್ಯಾಟ್ಸ್ ಮನ್ ಗಳಲ್ಲಿ ಗೆಲುವಿನ ಹಸಿವು ಕಾಣಲೇ ಇಲ್ಲ.

ಟೆಸ್ಟ್ ಪಂದ್ಯದಲ್ಲಿ ಆಡಬೇಕಾದ ತಾಳ್ಮೆ, ತಾಂತ್ರಿಕ ಕೌಶಲ್ಯತೆ ಯಾವುದೇ ಬ್ಯಾಟ್ಸ್ ಮನ್ ನ ಆಟದಲ್ಲಿ ಕಾಣಲಿಲ್ಲ ಎನ್ನುವುದು ವಿಪರ್ಯಾಸ. ಅಜಿಂಕ್ಯಾ ರೆಹಾನೆ, ಮುರಳಿ ವಿಜಯ್, ಕೆಎಲ್ ರಾಹುಲ್ ಈ ಮೂವರೂ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳಲ್ಲಿ ಈ ಸಾಮರ್ಥ್ಯವಿದ್ದರೂ ಅವರ ಶಾಟ್ ಸೆಲೆಕ್ಷನ್ ನಲ್ಲಿ ಬೇಜವಾಬ್ಧಾರಿತನ ಎದ್ದು ಕಾಣುತ್ತಿತ್ತು. ಇದೇ ಕಾರಣಕ್ಕೆ ಒಂದು ಅದ್ಭುತವಾಗಿ ಮುಗಿಯಬೇಕಿದ್ದ ಪಂದ್ಯ ಸೋಲಿನ ಕಹಿಯೊಂದಿಗೆ ಕೊನೆಗೊಂಡಿತು. ಬಹುಶಃ ಇಂಗ್ಲೆಂಡ್ ನಲ್ಲಿ ಗೆಲ್ಲಲು ಟೀಂ ಇಂಡಿಯಾಕ್ಕೆ ಇದಕ್ಕಿಂತ ದೊಡ್ಡ ಅವಕಾಶ ಬೇರೊಂದಿರಲಿಲ್ಲ. ಅದನ್ನು ಕೈಯಾರೆ ಹಾಳು ಮಾಡಿಕೊಂಡ ಅಪಕೀರ್ತಿ ಟೀಂ ಇಂಡಿಯಾದ್ದಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs RR Match: ಇಂದು ತವರಿನಲ್ಲಿ ಆರ್‌ಸಿಬಿ ಮ್ಯಾಜಿಕ್ ಮಾಡಿದ್ರೆ, ಮಹತ್ವದ ಬದಲಾವಣೆ ಫಿಕ್ಸ್‌

MI vs SRH Match:ಇಶಾನ್ ಕಿಶಾನ್ ಔಟ್ ಹಿಂದೆ ಮ್ಯಾಚ್‌ ಫಿಕ್ಸಿಂಗ್ ಆರೋಪ, ಈ ದೃಶ್ಯಗಳೇ ಸಾಕ್ಷಿ ಎಂದ ನೆಟ್ಟಿಗರು

Viral Video: ಪಹಲ್ಗಾಮ್ ಸಂತ್ರಸ್ತರಿಗೆ ಮೌನ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಪಾಂಡ್ಯದ್ದು ಇದೇನು ವರ್ತನೆ

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗೆ ಕೊಲೆ ಬೆದರಿಕೆ

IPL 2025 RCB vs RR: ತವರಿನಲ್ಲಿ ಮಾನ ವಾಪಸ್ ಪಡೆಯಲು ಆರ್ ಸಿಬಿಗೆ ಇಂದು ಒಳ್ಳೆ ಚಾನ್ಸ್

ಮುಂದಿನ ಸುದ್ದಿ
Show comments