Webdunia - Bharat's app for daily news and videos

Install App

ಟಿ20 ಕ್ರಿಕೆಟ್ ಕ್ಯಾಪ್ಟನ್ ಆದ ಮೇಲೆ ಕಳೆಗುಂದಿದ್ರಾ ಸೂರ್ಯಕುಮಾರ್ ಯಾದವ್

Krishnaveni K
ಗುರುವಾರ, 25 ಸೆಪ್ಟಂಬರ್ 2025 (10:26 IST)
ದುಬೈ: ಟಿ20 ಕ್ರಿಕೆಟ್ ಕ್ಯಾಪ್ಟನ್ ಆದ ಮೇಲೆ ಸೂರ್ಯಕುಮಾರ್ ಯಾದವ್ ಕಳೆಗುಂದಿದ್ರಾ ಎಂಬ ಅನುಮಾನ ಶುರುವಾಗಿದೆ. ಕಳೆದ 10 ಇನಿಂಗ್ಸ್ ಗಳಲ್ಲಿ ಅವರ ಬ್ಯಾಟಿಂಗ್ ಗಮನಿಸಿದರೆ ಈ ಅನುಮಾನ ಬಾರದೇ ಇರದು.

ರೋಹಿತ್ ಶರ್ಮಾ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಅವರು ನಿವೃತ್ತಿಯಾದರು. ರೋಹಿತ್ ನಿವೃತ್ತಿ ಬಳಿಕ ಅಚಾನಕ್ ಆಗಿ ಸೂರ್ಯಕುಮಾರ್ ಯಾದವ್ ಗೆ ಟಿ20 ನಾಯಕತ್ವ ಸಿಕ್ಕಿತು. ಆದರೆ ನಾಯಕನಾಗಿ ಕ್ಲಿಕ್ ಆದ ಸೂರ್ಯ ಬ್ಯಾಟಿಂಗ್ ಮರೆತರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ 20 ಪಂದ್ಯಗಳಲ್ಲಿ 18 ಇನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಅವರು ಗಳಿಸಿದ್ದು ಕೇವಲ 317 ರನ್. ಕೇವಲ 2 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಅದರಲ್ಲೂ ಕಳೆದ 10 ಇನಿಂಗ್ಸ್ ಗಳಿಂದ ಒಂದೇ ಒಂದು ಅರ್ಧಶತಕವೂ ಇಲ್ಲ.

ಏಷ್ಯಾ ಕಪ್ ನಲ್ಲಿ ಒಮ್ಮೆ 47 ರನ್ ಗಳಿಸಿದ್ದು ಬಿಟ್ಟರೆ ಕಳೆದ 10 ಇನಿಂಗ್ಸ್ ಗಳಲ್ಲಿ ಒಮ್ಮೆಯೂ ಅವರ ಸ್ಕೋರ್ 20 ದಾಟಿಲ್ಲ. ನಿನ್ನೆಯ ಪಂದ್ಯದಲ್ಲೂ 11 ಎಸೆತ ಎದುರಿಸಿ ಗಳಿಸಿದ್ದು ಕೇವಲ 5 ರನ್. ಒಂದು ಕಾಲದಲ್ಲಿ 360 ಹೊಡೆತಗಳ ಕಿಂಗ್, ಟಿ20 ಸ್ಪೆಷಲಿಸ್ಟ್ ಎಂದೆಲ್ಲಾ ಕರೆಯಿಸಿಕೊಂಡಿದ್ದ ಸೂರ್ಯ ನಾಯಕರಾಗುತ್ತಿದ್ದಂತೇ ತಮ್ಮ ಹಳೆಯ ಬ್ಯಾಟಿಂಗ್ ನ್ನೇ ಮರೆತಿದ್ದಾರೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಖಾಲಿ ಖಾಲಿ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟಿಗರ ಅಬ್ಬರ

IND vs WI: ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಹೊಸ ದಾಖಲೆ

IND vs WI TEST: ಕನ್ನಡಿಗ ರಾಹುಲ್‌ ಅಜೇಯ ಅರ್ಧಶತಕ: ಮೊದಲ ದಿನ ಭಾರತಕ್ಕೆ ಮೇಲುಗೈ

India vs West Indies TEST: ಸಿರಾಜ್, ಬೂಮ್ರಾ ಬೆಂಕಿದಾಳಿಗೆ ವಿಂಡೀಸ್ ಉಡೀಸ್‌

ಆರ್‌ಸಿಬಿ ತಂಡದ ಮಾರಾಟಕ್ಕೆ ಮತ್ತೆ ರೆಕ್ಕೆ ಪುಕ್ಕ: ಕುತೂಹಲ ಕೆರಳಿಸಿದ ಪೂನಾವಾಲ ಪೋಸ್ಟ್‌

ಮುಂದಿನ ಸುದ್ದಿ
Show comments