Select Your Language

Notifications

webdunia
webdunia
webdunia
Sunday, 6 April 2025
webdunia

ಶ್ರೇಯಸ್ ಅಯ್ಯರ್ ಗಾಯ ಗಂಭೀರ: ಏಕದಿನ ಸರಣಿಗೂ ಇರಲ್ಲ

ಶ್ರೇಯಸ್ ಅಯ್ಯರ್
ಮುಂಬೈ , ಸೋಮವಾರ, 13 ಮಾರ್ಚ್ 2023 (10:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಬ್ಯಾಟಿಗ ಶ್ರೇಯಸ್ ಅಯ್ಯರ್ ಬೆನ್ನು ನೋವಿಗೊಳಗಾಗಿದ್ದು, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಗಿಳಿದಿರಲಿಲ್ಲ.

ಅವರ ಬೆನ್ನು ನೋವು ಗಂಭೀರವಾಗಿದ್ದು, ಸ್ಕ್ಯಾನಿಂಗ್ ಗೆ ಕಳುಹಿಸಲಾಗಿದೆ. ಅವರ ಸ್ಕ್ಯಾನಿಂಗ್ ವರದಿ ಬಂದ ಮೇಲಷ್ಟೇ ಅವರು ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದು ಸ್ಪಷ್ಟವಾಗಲಿದೆ.

ಇತ್ತೀಚೆಗಷ್ಟೇ ಶ್ರೇಯಸ್ ಬೆನ್ನು ನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. ಆದರೆ ಈಗ ಮತ್ತೆ ಬೆನ್ನು ನೋವಿಗೊಳಗಾಗಿರುವುದರಿಂದ ಅವರ ಗಾಯ ಗಂಭೀರವಾಗಿದೆ ಎನ್ನಲಾಗಿದೆ.  ಹೀಗಾಗಿ ಏಕದಿನ ಸರಣಿಯಿಂದಲೂ ಅವರು ಹೊರಗುಳಿಯುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್: ಇಂದಾದರೂ ಆರ್ ಸಿಬಿಗೆ ದಕ್ಕುತ್ತಾ ಮೊದಲ ಜಯ?