Select Your Language

Notifications

webdunia
webdunia
webdunia
webdunia

ನನ್ನಿಂದಾಗಿಯೇ ಐಪಿಎಲ್ ಉಳಿಯಿತು ಎಂದು ಸೆಹ್ವಾಗ್ ಹೇಳಿದ್ದೇಕೆ?!

ನನ್ನಿಂದಾಗಿಯೇ ಐಪಿಎಲ್ ಉಳಿಯಿತು ಎಂದು ಸೆಹ್ವಾಗ್ ಹೇಳಿದ್ದೇಕೆ?!
ಮೊಹಾಲಿ , ಶನಿವಾರ, 21 ಏಪ್ರಿಲ್ 2018 (10:33 IST)
ಮೊಹಾಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಆಗಿರುವ ವೀರೇಂದ್ರ ಸೆಹ್ವಾಗ್ ಹರಾಜು ಪ್ರಕ್ರಿಯೆಯಲ್ಲೂ ತಂಡದ ಪ್ರಮುಖ ಭಾಗವಾಗಿದ್ದರು. ಇದೀಗ ಈ ಐಪಿಎಲ್ ಉಳಿದಿರುವುದೇ ತನ್ನಿಂದ ಎಂದು ಹೇಳಿಕೊಂಡಿದ್ದಾರೆ.

ಸದಾ ವಿಡಂಬನಾತ್ಮಕ ಟ್ವೀಟ್ ಮಾಡುವ ಸೆಹ್ವಾಗ್ ಈ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದು, ಕ್ರಿಸ್ ಗೇಲ್ ಸುನಾಮಿ ಇನಿಂಗ್ಸ್ ನೋಡಿ ಈ ರೀತಿ ಟ್ವೀಟ್ ಮಾಡಿದ್ದಾರೆ.

ಈ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಆರಂಭದಲ್ಲಿ ಗೇಲ್ ಯಾವುದೇ ತಂಡಕ್ಕೆ ಹರಾಜಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಪಂಜಾಬ್ ಅವರನ್ನು 2 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು. ಇದಕ್ಕೆ ಸೆಹ್ವಾಗ್ ಸಲಹೆಯೇ ಕಾರಣವಾಗಿತ್ತಂತೆ.

ಪಂಜಾಬ್ ತಂಡಕ್ಕೆ ಬಂದ ಮೇಲೆ ಗೇಲ್ ಈ ಕೂಟದ ಮೊದಲ ಶತಕ ಗಳಿಸಿದ್ದಲ್ಲದೆ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಒಂದು ವೇಳೆ ಅವರಿಲ್ಲದೇ ಹೋಗಿದ್ದರೆ ಒಬ್ಬ ಭರ್ಜರಿ ಎಂಟರ್ ಟೈನರ್ ಇಲ್ಲದೆ ಐಪಿಎಲ್ ಸೊರಗುತ್ತಿತ್ತು. ಹಾಗಾಗಿ ನನ್ನಿಂದಾಗಿ ಅದು ತಪ್ಪಿತು ಎಂದು ಸೆಹ್ವಾಗ್ ತಮಾಷೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಕ್ರಿಸ್ ಗೇಲ್ ರನ್ನೂ ಮೀರಿದ ಶೇನ್ ವ್ಯಾಟ್ಸನ್