Webdunia - Bharat's app for daily news and videos

Install App

Samit Dravid: ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾದ ಮರಿ ದ್ರಾವಿಡ್

Samit Dravid
Krishnaveni K
ಶನಿವಾರ, 31 ಆಗಸ್ಟ್ 2024 (12:27 IST)
ಮುಂಬೈ: ಟೀಂ ಇಂಡಿಯಾ ವಾಲ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಅಪ್ಪನ ಹಾದಿಯಲ್ಲಿದ್ದಾರೆ. ಭಾರತದ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಂಡರ್ 19 ಸರಣಿಗೆ ಭಾರತದ ಕಿರಿಯರ ತಂಡ ಆಯ್ಕೆ ಮಾಡಲಾಗಿದ್ದು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕೂಡಾ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ತಂಡದಲ್ಲಿ ಸಮಿತ್ ಆಯ್ಕೆಯಾಗಿರುವುದು ವಿಶೇಷ.

ಏಕದಿನ ತಂಡದ ನಾಯಕನಾಗಿ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಮಾನ್, ಟೆಸ್ಟ್ ತಂಡಕ್ಕೆ ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ನಾಯಕರಾಗಿದ್ದಾರೆ. ಈ ತಂಡದಲ್ಲಿ ಸಮಿತ್ ದ್ರಾವಿಡ್ ಅಲ್ಲದೆ, ಕರ್ನಾಟಕದಿಂದ ಕಾರ್ತಿಕೇಯ ಕೆಪಿ, ಸಮರ್ಥ್, ಹಾರ್ದಿಕ್ ರಾಜ್ ಕೂಡಾ ಆಯ್ಕೆಯಾಗಿದ್ದಾರೆ.

ವಿಶೇಷವೆಂದರೆ ರಾಹುಲ್ ದ್ರಾವಿಡ್ ಕೂಡಾ ಇದೇ ಅಂಡರ್ 19 ತಂಡದ ಕೋಚ್ ಆಗಿ ಹಲವು ಯುವ ಕ್ರಿಕೆಟಿಗರನ್ನು ಭಾರತ ತಂಡಕ್ಕೆ ಕೊಡುಗೆಯಾಗಿ ನೀಡಿದ್ದರು. ಇದೀಗ ಅದೇ ತಂಡಕ್ಕೆ ಪುತ್ರ ಸಮಿತ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಮುಂದೆ ರಾಷ್ಟ್ರೀಯ ತಂಡ ಸೇರಿಕೊಳ್ಳುವ ನಿಟ್ಟಿನಲ್ಲಿ ಸಮಿತ್ ಗೆ ಇದು ಮೊದಲ ಹೆಜ್ಜೆಯಾಗಿರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 RCB vs PBKS: ನಿಮ್ಮ ಮೈದಾನದಲ್ಲೇ ಗೆದ್ದಿದ್ದೇವೆ ನೋಡ್ಕೋ ಎಂದ ಕೊಹ್ಲಿ, ಶ್ರೇಯಸ್ ಅಯ್ಯರ್ ಗಪ್ ಚುಪ್ Video

RCB vs PBKS Match:ಪಂಜಾಬ್‌ ತವರಿನಲ್ಲೇ ರೀವೆಂಜ್‌ ತೀರಿಸಿಕೊಂಡ ಆರ್‌ಸಿಬಿ

IPL 2025: RCB ಫ್ಯಾನ್ಸ್ ಕೆಣಕಿದ ಶ್ರೇಯಸ್‌ ಅಯ್ಯರ್‌ಗೆ ಗೆಲುವಿನ ಮೂಲಕ ಕೊಹ್ಲಿ ಕೊಡುತ್ತಾರಾ ಕೌಂಟರ್‌

Vaibhav Suryavamshi: ಐಪಿಎಲ್‌ ಚೊಚ್ಚಲ ಪಂದ್ಯಾಟಕಕ್ಕಾಗಿ ಪಿಜ್ಜಾ, ಮಟನ್‌ಗೆ ಗುಡ್‌ಬೈ ಹೇಳಿದ ವೈಭವ್ ಸೂರ್ಯವಂಶಿ

RCB vs PBKS Match live: ಪಂಜಾಬ್ ವಿರುದ್ಧ ಸೇಡು ತೀರಿಸಕೊಳ್ಳುತ್ತಾ ರಜತ್ ಪಟಿದಾರ್ ಪಡೆ

ಮುಂದಿನ ಸುದ್ದಿ
Show comments