Select Your Language

Notifications

webdunia
webdunia
webdunia
webdunia

ಮೇ 14 ರಂದು ವಿಚಾರಣೆಗೆ ಹಾಜರಾಗಲು ಸಚಿನ್ ತೆಂಡುಲ್ಕರ್, ಲಕ್ಷ್ಮಣ್ ಗೆ ನೋಟಿಸ್

ಮೇ 14 ರಂದು ವಿಚಾರಣೆಗೆ ಹಾಜರಾಗಲು ಸಚಿನ್ ತೆಂಡುಲ್ಕರ್, ಲಕ್ಷ್ಮಣ್ ಗೆ ನೋಟಿಸ್
ಮುಂಬೈ , ಮಂಗಳವಾರ, 7 ಮೇ 2019 (08:16 IST)
ಮುಂಬೈ: ಸ್ವ ಹಿತಾಸಕ್ತಿ ಹುದ್ದೆ ನಿಭಾಯಿಸುತ್ತಿರುವ ಆರೋಪ ಎದುರಿಸುತ್ತಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಮೇ 14 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.


ಸಚಿನ್ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸಲಹೆಗಾರನಾಗಿ ಮತ್ತು ವಿವಿಎಸ್ ಲಕ್ಷ್ಮಣ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರೂ ಬಿಸಿಸಿಐ ತಾಂತ್ರಿಕ ಸಮಿತಿಯ ಸದಸ್ಯರೂ ಹೌದು.

ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಏಕಕಾಲಕ್ಕೆ ಲಾಭದಾಯಕ ಹುದ್ದೆ ಮತ್ತು ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಹುದ್ದೆ ನಿರ್ವಹಿಸುವಂತಿಲ್ಲ. ಹೀಗಾಗಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಸ್ವತಂತ್ರ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಮೊದಲು ಗಂಗೂಲಿ ಕೂಡಾ ಇದೇ ವಿಚಾರದಲ್ಲಿ ವಿಚಾರಣೆ ಎದುರಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೀನೇ ನನ್ನ ಬೆಸ್ಟ್ ಪಾರ್ಟನರ್ ಎಂದು ಕೆಎಲ್ ರಾಹುಲ್ ಗೆ ಹೇಳಿದ್ದು ಯಾರು ಗೊತ್ತೇ?