Webdunia - Bharat's app for daily news and videos

Install App

ತಲೆ ಮೇಲೆ ಕೈ ಹೊತ್ತು ಕೂತ ರವೀಂದ್ರ ಜಡೇಜಾ!

Webdunia
ಬುಧವಾರ, 6 ಡಿಸೆಂಬರ್ 2017 (11:36 IST)
ದೆಹಲಿ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ರವೀಂದ್ರ ಜಡೇಜಾಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಊಟದ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿರುವ ಲಂಕಾ ಪಂದ್ಯ ಉಳಿಸಿಕೊಳ್ಳಲು ಹೋರಾಡುತ್ತಿದೆ.
 

ಅಂತಿಮ ದಿನವಾದ ಇಂದು 410 ರನ್ ಗಳ ಗೆಲುವಿನ ಗುರಿ ಬೆನ್ನತ್ತಿರುವ ಲಂಕಾ ಮೊದಲ ಅವಧಿಯಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡಿದೆ. ಊಟದ ವಿರಾಮಕ್ಕಿಂತ ಮೊದಲ ಓವರ್ ನಲ್ಲಿ ಲಂಕಾ ನಾಯಕ ಚಂಡಿಮಾಲ್ ಇನ್ನೇನು ಔಟ್ ಆಗಲಿದ್ದರು. ಆದರೆ ಜಡೇಜಾ ಎಸೆದ ಆ ಎಸೆತ ನೋ ಬಾಲ್ ಆಗಿತ್ತು.

ಮೂರನೇ ಅಂಪಾಯರ್ ಇದನ್ನು ದೃಢಪಡಿಸಿದರು. ಇದರೊಂದಿಗೆ ಚಂಡಿಮಾಲ್ ಬಚವಾದರು. ಅಷ್ಟೇ ಅಲ್ಲ, ಲಂಕಾಗೆ ದೊಡ್ಡ ಹೊಡೆತವೊಂದು ತಪ್ಪಿ ಹೋಯಿತು.  ಇದೀಗ ಚಂಡಿಮಾಲ್ 27 ರನ್ ಗಳಿಸಿದ್ದರೆ, ಇನ್ನೊಂದು ತುದಿಯಲ್ಲಿ ಅರ್ಧಶತಕ ಗಳಿಸಿರುವ ಧನಂಜಯ ಡಿಸಿಲ್ವ 72 ರನ್ ಗಳಿಸಿದ್ದಾರೆ. ಲಂಕಾಗೆ ಗೆಲುವಿಗೆ ಇನ್ನು 291 ರನ್ ಗಳ ಅಗತ್ಯವಿದೆ. ಆದರೆ ಜಿಗುಟಿನ ಆಟವಾಡುತ್ತಿರುವ ಲಂಕಾ ಭಾರತಕ್ಕೆ ಆತಂಕ ಉಂಟುಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Shubman Gill: ಹಾರ್ದಿಕ್ ಪಾಂಡ್ಯ ಜೊತೆ ಮುನಿಸು, ಎಲ್ಲವನ್ನೂ ಬಿಚ್ಚಿಟ್ಟ ಶುಬ್ಮನ್ ಗಿಲ್, ಫ್ಯಾನ್ಸ್ ಶಾಕ್

Shahid Afridi: ಶಾಹಿದ್ ಅಫ್ರಿದಿಯನ್ನು ಕರೆಸಿ ಸನ್ಮಾನ ಮಾಡಿದ ದುಬೈ ಕೇರಳಿಗರು: ಪಹಲ್ಗಾಮ್ ದಾಳಿ ಮರೆತ್ರಾ

IPL 2025: ಮೂರು ಐಪಿಎಲ್ ಫೈನಲ್ ಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಇಲ್ಲಿದೆ ವಿವರ

IPL 2025: ನಮ್ಗೆ ಫೈನಲ್ ನಲ್ಲಿ ಆರ್ ಸಿಬಿ ವರ್ಸಸ್ ಮುಂಬೈ ಬೇಕೇ ಬೇಕು

IPL 2025: ಎರಡು ಜೀವದಾನದ ಲಾಭ ಪಡೆದು ಮುಂಬೈ ತಂಡವನ್ನು ಕ್ವಾಲಿಫೈಯರ್‌ಗೆ ಕೊಂಡೊಯ್ದ ರೋಹಿತ್‌ ಶರ್ಮಾ

ಮುಂದಿನ ಸುದ್ದಿ
Show comments