Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್:  ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದ ಕರ್ನಾಟಕ
ಕಾನ್ಪುರ , ಸೋಮವಾರ, 20 ನವೆಂಬರ್ 2017 (16:17 IST)
ಕಾನ್ಪುರ: ಉತ್ತರ ಪ್ರದೇಶ ಮತ್ತು ಕರ್ನಾಟಕ ನಡುವಿನ ರಣಜಿ ಟ್ರೋಫಿ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಆದರೆ ಈ ಪಂದ್ಯದೊಂದಿಗೆ ರಾಜ್ಯದ ಹುಡುಗರು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
 

ಅಂತಿಮ ದಿನವಾದ ಇಂದು ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ ಬಿರುಸಿನ 262 ರನ್ ಗಳಿಸಿತು. ಅದೂ ವಿಕೆಟ್ ನಷ್ಟವಿಲ್ಲದೇ. ಮೊದಲ ಇನಿಂಗ್ಸ್ ನಲ್ಲಿ ಶತಕ ವಂಚಿತರಾಗಿದ್ದ ಮಯಾಂಕ್ ಅಗರ್ವಾಲ್ ಈ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದರು. ಮಯಾಂಕ್ ಅಜೇಯ 133, ರವಿಕಾಂತ್ ಸಮರ್ಥ್ ಅಜೇಯ 126  ಸಿಡಿಸಿದರು.

ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ್ದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಠರಾದರು. ಈ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಎದುರಾಳಿ ಮೇಲೆ ಫಾಲೋ ಆನ್ ಹೇರದ ಕರ್ನಾಟಕ ಮೂರು ಅಂಕ ಪಡೆದುಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಟೀಂ ಇಂಡಿಯಾಕ್ಕೆ ಪೆಟ್ಟು ಕೊಟ್ಟ ಲಕ್ಮಲ್