Select Your Language

Notifications

webdunia
webdunia
webdunia
webdunia

ಕೋಚ್ ರವಿಶಾಸ್ತ್ರಿಯೇ ಆದರೂ ಟೀಂ ಇಂಡಿಯಾ ತುಂಬಾ ಈಗ ರಾಹುಲ್ ದ್ರಾವಿಡ್ ಹುಡುಗರದ್ದೇ ಕಾರುಬಾರು!

ಕೋಚ್ ರವಿಶಾಸ್ತ್ರಿಯೇ ಆದರೂ ಟೀಂ ಇಂಡಿಯಾ ತುಂಬಾ ಈಗ ರಾಹುಲ್ ದ್ರಾವಿಡ್ ಹುಡುಗರದ್ದೇ ಕಾರುಬಾರು!
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (08:25 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಇದೀಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಭಾರತ ಎ ತಂಡದ ಹುಡುಗರ ಸಂಖ್ಯೆಯೇ ಅಧಿಕವಾಗಿದೆ.

ಮುರಳಿ ವಿಜಯ್ ಮತ್ತು ಕುಲದೀಪ್ ಯಾದವ್ ಸ್ಥಾನಕ್ಕೆ ದ್ರಾವಿಡ್ ರ ಎ ತಂಡದ ಪೃಥ್ವಿ ಶಾ, ಹನುಮ ವಿಹಾರಿ ಆಯ್ಕೆಯಾಗುವುದರ ಮೂಲಕ ಈ ಸಂಖ್ಯಾಬಲ ಇನ್ನಷ್ಟು ಹೆಚ್ಚಿದೆ.

ಈಗಾಗಲೇ ದ್ರಾವಿಡ್ ಗರಡಿಯಲ್ಲಿ ಪಳಗಿದ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಜತೆಗೆ ಇದೀಗ ಈ ಇಬ್ಬರು ಹೊಸ ಆಟಗಾರರೂ ಸೇರ್ಪಡೆಯಾಗಿದ್ದಾರೆ. ಭಾರತ ಎ ತಂಡದಲ್ಲಿ ಕಮಾಲ್ ಮಾಡಿದ್ದ ಈ ಆಟಗಾರರು ಟೀಂ ಇಂಡಿಯಾದಲ್ಲೂ ದ್ರಾವಿಡ್ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿಯೇ ಒಪ್ಪಿಸುತ್ತಿದ್ದಾರೆ. ಅಂತೂ ದ್ರಾವಿಡ್ ತಮ್ಮ ಎ ತಂಡವನ್ನು ಚೆನ್ನಾಗಿ ಪಳಗಿಸಿದ್ದಾರೆಂಬುದಕ್ಕೆ ಇವರೇ ಸಾಕ್ಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಫಾರ್ಮ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯಕ್ಕೆ ಸ್ಥಾನ ಕಳೆದುಕೊಂಡ ಟೀಂ ಇಂಡಿಯಾ ಆಟಗಾರರು