Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗ್ರಹಚಾರ ಸರಿಯಾಗಲು ಪೂಜೆ ಮಾಡುವಂತೆ ಸಲಹೆ!

ಕೆಎಲ್ ರಾಹುಲ್ ಗ್ರಹಚಾರ ಸರಿಯಾಗಲು ಪೂಜೆ ಮಾಡುವಂತೆ ಸಲಹೆ!
ಬೆಂಗಳೂರು , ಭಾನುವಾರ, 24 ಜುಲೈ 2022 (08:30 IST)
ಬೆಂಗಳೂರು: ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಗಾದೆ ಸದ್ಯಕ್ಕೆ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಗೆ ಸರಿಯಾಗಿಯೇ ಅನ್ವಯಿಸುತ್ತದೆ.

ಗಾಯದಿಂದಾಗಿ ಇಂಗ್ಲೆಂಡ್ ಸರಣಿ ಮಿಸ್ ಮಾಡಿಕೊಂಡಿದ್ದ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿ ಈಗ ತಾನೇ ಫಿಟ್ ಆಗಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನುವಷ್ಟರಲ್ಲಿ ಕೊರೋನಾ ಕಾಟ ಎದುರಾಗಿದೆ. ಹೀಗಾಗಿ ನೆಟ್ಟಿಗರು ರಾಹುಲ್ ದುರಾದೃಷ್ಟದ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಲವರಂತೂ ರಾಹುಲ್ ಗೆ ಶಾಂತಿ ಪೂಜೆ ಮಾಡಿಸಲು ಸಲಹೆ ಕೊಟ್ಟಿದ್ದಾರೆ! ಯಾಕೋ ನಿಮ್ಮ ಗ್ರಹಚಾರವೇ ಸರಿ ಇಲ್ಲ. ಏನೋ ದೋಷವಿರಬೇಕು. ಹೀಗಾಗಿ ಪೂಜೆ ಮಾಡಿಸಿ ಎಂದು ಸಲಹೆ ಕೊಡುತ್ತಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಏಷ್ಯಾ ಕಪ್, ವಿಶ್ವಕಪ್ ಗೆಲ್ಲಿಸಿಕೊಡುವುದೇ ನನ್ನ ಮುಂದಿನ ಗುರಿ: ವಿರಾಟ್ ಕೊಹ್ಲಿ