Publish Date: Thu, 02 Mar 2023 (17:15 IST)
Updated Date: Thu, 02 Mar 2023 (17:16 IST)
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಂಪಾಯರ್ ಗಳ ಕೆಟ್ಟ ತೀರ್ಪಿಗೆ ಬಲಿಯಾಗಬೇಕಾಯಿತು.
ಎರಡನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಅಂಪಾಯರ್ ನಿತಿನ್ ಮೆನನ್ ನೀಡಿದ ತಪ್ಪು ತೀರ್ಪಿಗೆ ಬಲಿಯಾಗಿದ್ದರು. ಇದೀಗ ಮತ್ತೆ ಭಾರತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿರುದ್ಧ ನೀಡಿದ್ದ ಎಲ್ ಬಿಡಬ್ಲ್ಯು ತೀರ್ಪು ವಿವಾದಾತ್ಮಕವಾಗಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಆದರೆ ಕೊಹ್ಲಿ ಇದನ್ನು ಪ್ರಶ್ನಿಸಿ ಡಿಆರ್ ಎಸ್ ಗೆ ಮನವಿ ಸಲ್ಲಿಸಲಿಲ್ಲ. ಹೀಗಾಗಿ ವಿಕೆಟ್ ತೆರಬೇಕಾಯಿತು.
ಇದರಿಂದಾಗಿ ಕೊಹ್ಲಿ ಅಭಿಮಾನಿಗಳು ಅಂಪಾಯರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ಸರಣಿಯಲ್ಲಿ ಎರಡು ಬಾರಿ ಕೊಹ್ಲಿ ವಿರುದ್ಧ ತಪ್ಪು ತೀರ್ಪು ಬಂದಿದೆ. ಹೀಗಾಗಿ ಕೊಹ್ಲಿಯನ್ನು ಅಂಪಾಯರ್ ಗಳು ಟಾರ್ಗೆಟ್ ಮಾಡಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ.