ಕೆಎಲ್ ರಾಹುಲ್ ಗೆ ಲೆಫ್ಟ್ ರೈಟ್ ಮಂಗಳಾರತಿ ಮಾಡಿದ್ದ ರಾಹುಲ್ ದ್ರಾವಿಡ್: ಇಂಟ್ರೆಸ್ಟಿಂಗ್ ಕಹಾನಿ

Krishnaveni K
ಗುರುವಾರ, 30 ಅಕ್ಟೋಬರ್ 2025 (10:52 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ರಾಹುಲ್ ದ್ರಾವಿಡ್ ಒಮ್ಮೆ ಕೆಎಲ್ ರಾಹುಲ್ ವರ್ತನೆಗೆ ಅಸಮಾಧಾನಗೊಂಡು ಲೆಫ್ಟ್ ರೈಟ್ ಮಂಗಳಾರತಿ ಮಾಡಿದ್ದರಂತೆ. ಇದನ್ನು ಸ್ವತಃ ಕೆಎಲ್ ರಾಹುಲ್ ಪಾಡ್ ಕಾಸ್ಟ್ ಒಂದರಲ್ಲಿ ರಿವೀಲ್ ಮಾಡಿದ್ದಾರೆ.

ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಶಾಂತ ಸ್ವಭಾವದವರು ಎಂದೇ ಪರಿಚಿತರು. ಅವರು ಸಿಟ್ಟಾಗುವುದು ತೀರಾ ಕಡಿಮೆ. ಆದರೆ ಕೆಎಲ್ ರಾಹುಲ್ ಮೇಲೆ ಅವರು ಒಮ್ಮೆ ಸಿಟ್ಟಾಗಿ ಪ್ರಶ್ನೆ ಮಾಡಿದ್ದರಂತೆ. ಆ ಘಟನೆ ಬಗ್ಗೆ ರಾಹುಲ್ ಫನ್ನಿಯಾಗಿ ರಿವೀಲ್ ಮಾಡಿದ್ದಾರೆ.

ಆಗಷ್ಟೇ ನಾನು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದೆ. 2023 ರ ಏಷ್ಯಾ ಕಪ್ ಪಾಕಿಸ್ತಾನ ವಿರುದ್ಧದ ಪಂದ್ಯ ಕೊಲೊಂಬೋದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಶ್ರೇಯಸ್ ಅಯ್ಯರ್ ಆಡಲಾಗಲಿಲ್ಲ. ಅವರ ಸ್ಥಾನಕ್ಕೆ ನನ್ನನ್ನು ತಂಡಕ್ಕೆ ಸೇರಿಸಿದ್ದರು.

ಆ ಪಂದ್ಯದಲ್ಲಿ ನಾನು ಶತಕ ಸಿಡಿಸಿದ್ದೆ. ಶತಕ ಸಿಡಿಸಿದ ಬಳಿಕ ಡ್ರೆಸ್ಸಿಂಗ್ ರೂಂಗೆ ಬೆನ್ನು ಹಾಕಿ ಬ್ಯಾಟ್ ಮೇಲೆತ್ತಿ ಸೆಲೆಬ್ರೇಷನ್ ಮಾಡಿದ್ದೆ. ಇದಕ್ಕೆ ದ್ರಾವಿಡ್ ಸರ್ ಸಿಟ್ಟಾಗಿದ್ದರು. ನಾನು ಪೆವಿಲಿಯನ್ ಗೆ ಬಂದ ಮೇಲೆ ಯಾಕೆ ಡ್ರೆಸ್ಸಿಂಗ್ ರೂಂಗೆ ಬೆನ್ನು ಹಾಕಿ ಸೆಲೆಬ್ರೇಷನ್ ಮಾಡಿದೆ ಎಂದು ಪ್ರಶ್ನೆ ಮಾಡಿದರು. ಆಗ ನಾನು ಇಲ್ಲ ಸರ್, ಅಗೌರವ ತೋರಬೇಕು ಎಂದಲ್ಲ. ಆರೇಳು ತಿಂಗಳ ನಂತರ ಕ್ರಿಕೆಟ್ ಗೆ ಮರಳಿದ್ದೇನೆ. ನಾನು ಹೀಗೆ ಸೆಲೆಬ್ರೇಷನ್ ಮಾಡುವುದನ್ನು ಯಾರಾದರೂ ಪ್ರತಿಮೆ ನಿರ್ಮಿಸಲಿ ಎಂದು ನನ್ನ ಕನಸು ಎಂದೆ. ಇದಕ್ಕೆ ದ್ರಾವಿಡ್ ಸರ್ ನಗುತ್ತಾ ‘ಏನು ನಿನ್ನ ಪ್ರತಿಮೆಯಾ? ನನ್ನದೇ ಇನ್ನೂ ಯಾರೂ ಮಾಡಿಲ್ಲ, ಇನ್ನು ನಿನ್ನದು ಮಾಡ್ತಾರಾ?’ ಎಂದು ಜೋಕ್ ಮಾಡಿದ್ದರು. ಹೀಗಾಗಿ ಈ ಶತಕ ನನಗೆ ಸ್ಪೆಷಲ್ ಎಂದು ರಾಹುಲ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಜಯ್ ಶಾ ಎಂದ್ರೆ ಸುಮ್ನೇ ಅಲ್ಲ, ಮಹಿಳಾ ಕ್ರಿಕೆಟ್ ತಾರೆಯರಿಗೆ ಇದಕ್ಕೇ ಜಯ್ ಶಾ ಮೆಲೆ ಪ್ರೀತಿ

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ಮುಂದಿನ ಸುದ್ದಿ
Show comments