Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಉಪನಾಯಕನ ಪಟ್ಟ

ಕೆಎಲ್ ರಾಹುಲ್ ಗೆ ಉಪನಾಯಕನ ಪಟ್ಟ
ಕೋಲ್ಕೊತ್ತಾ , ಶನಿವಾರ, 4 ನವೆಂಬರ್ 2023 (17:44 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಈ ವಿಶ್ವಕಪ್ ನಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ಹೊಸ ಉಪನಾಯಕನ ನೇಮಕ ಮಾಡಿದೆ.

ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಉಪನಾಯಕ ಹಾರ್ದಿಕ್ ಪಾಂಡ್ಯ ಕಾಲಿಗೆ ಏಟು ಮಾಡಿಕೊಂಡಿದ್ದರು. ಪರಿಣಾಮ ಅವರು ಈ ವಿಶ್ವಕಪ್ ನಿಂದಲೇ ಹೊರನಡೆಯಬೇಕಾಗಿ ಬಂದಿದೆ.

ಇದೀಗ ಅವರ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟಿಗ ಕೆಎಲ್ ರಾಹುಲ್ ರನ್ನು ಉಪನಾಯಕನಾಗಿ ಬಿಸಿಸಿಐ ನೇಮಕ ಮಾಡಿದೆ. ರಾಹುಲ್ ವಿಕೆಟ್ ಹಿಂದೆ ನಿಂತು ಡಿಆರ್ ಎಸ್ ವಿಚಾರದಲ್ಲಿ ರೋಹಿತ್ ಶರ್ಮಾಗೆ ಕರಾರುವಾಕ್ ನಿರ್ಣಯ ತೆಗೆದುಕೊಳ್ಳುವಲ್ಲಿ ತಕ್ಕ ಸಲಹೆ ನೀಡುತ್ತಿರುತ್ತಾರೆ. ಅಲ್ಲದೆ, ತಂಡದ ಅನುಭವಿ ಆಟಗಾರನಾಗಿರುವ ಕಾರಣಕ್ಕೆ ಅವರನ್ನು ಉಪನಾಯಕನಾಗಿ ನೇಮಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಚಿನ್ನಸ್ವಾಮಿಯಲ್ಲಿ ರನ್ ಹೊಳೆ