Publish Date: Sat, 07 Apr 2018 (06:43 IST)
Updated Date: Sat, 07 Apr 2018 (06:45 IST)
ನವದೆಹಲಿ: ಐಪಿಎಲ್ ನ ಈ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ರನ್ನು ಕರ್ನಾಟಕ ಕೋಚ್ ಶಶಿಕಾಂತ್ ರಾಹುಲ್ ದ್ರಾವಿಡ್ ರಂತೆ ನಿಸ್ವಾರ್ಥಿ ಎಂದು ಹೊಗಳಿದ್ದಾರೆ.
ರಾಹುಲ್ ದ್ರಾವಿಡ್ ರಂತೇ ರಾಹುಲ್ ಕೂಡಾ ಹೆಚ್ಚಾಗಿ ತಂಡಕ್ಕಾಗಿ ಸ್ಥಾನವನ್ನೇ ತ್ಯಾಗ ಮಾಡಿದರೂ ಬೇಸರಿಸಿಕೊಳ್ಳದ ವ್ಯಕ್ತಿ. ಇದೀಗ ಐಪಿಎಲ್ ನಲ್ಲಿ ಪಂಜಾಬ್ ಪರ ಅವರಿಗೆ ಡಬಲ್ ಹೊಣೆಗಾರಿಕೆ ಇದೆ.
ಬ್ಯಾಟ್ಸ್ ಮನ್ ಆಗಿ ಪಂಜಾಬ್ ತಂಡಕ್ಕೆ ಆಧಾರವಾಗಬೇಕಲ್ಲದೆ, ವಿಕೆಟ್ ಕೀಪರ್ ಆಗಿಯೂ ರಾಹುಲ್ ನೆರವಾಗಬೇಕಿದೆ. ಆದರೆ ಈ ಎಲ್ಲಾ ಜವಾಬ್ದಾರಿಯನ್ನು ಯಾವುದೇ ಬೇಸರವಿಲ್ಲದೇ ನಿಭಾಯಿಸುವ ಕಾರಣಕ್ಕೆ ರಾಹುಲ್ ರನ್ನು ಈ ರೀತಿ ಹೊಗಳಿದ್ದಾರೆ ಕೋಚ್ ಶಶಿಕಾಂತ್. ದ್ರಾವಿಡ್ ರಂತೇ ತಂಡಕ್ಕೆ ಬೇಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ನಾನು ಕೀಪಿಂಗ್ ಮಾಡುವುದರಿಂದ ಇನ್ನೊಬ್ಬ ಆಟಗಾರನನ್ನು ಆಡಿಸಲು ಸಾಧ್ಯವಾಗುತ್ತದೆ ಎಂದಾದರೆ ಕೀಪಿಂಗ್ ಮಾಡಲು ನಾನು ರೆಡಿ ಎಂದು ಸ್ವಲ್ಪವೂ ಬೇಸರಿಸದ ರಾಹುಲ್ ಬಗ್ಗೆ ಕೋಚ್ ಶಶಿಕಾಂತ್ ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.