Select Your Language

Notifications

webdunia
webdunia
webdunia
webdunia

ಜಿಂಬಾಬ್ವೆ ಸರಣಿಗೆ ಕೆಎಲ್ ರಾಹುಲ್ ನಾಯಕ: ಶಿಖರ್ ಧವನ್ ಗೆ ದಿಡೀರ್ ಕೊಕ್!

ಜಿಂಬಾಬ್ವೆ ಸರಣಿಗೆ ಕೆಎಲ್ ರಾಹುಲ್ ನಾಯಕ: ಶಿಖರ್ ಧವನ್ ಗೆ ದಿಡೀರ್ ಕೊಕ್!
ಮುಂಬೈ , ಶುಕ್ರವಾರ, 12 ಆಗಸ್ಟ್ 2022 (07:58 IST)
ಮುಂಬೈ: ಜಿಂಬಾಬ್ವೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ಶಿಖರ್ ಧವನ್ ಬದಲು ಕೆಎಲ್ ರಾಹುಲ್ ನಾಯಕರಾಗಿ ದಿಡೀರ್ ನೇಮಕಗೊಂಡಿದ್ದಾರೆ.

ಗಾಯಗೊಂಡಿದ್ದ ಕೆಎಲ್ ರಾಹುಲ್ ಚೇತರಿಸಿಕೊಂಡಿದ್ದು ಫಿಟ್ನೆಸ್ ಸಾಬೀತುಪಡಿಸಿದ ಹಿನ್ನಲೆಯಲ್ಲಿ ಅವರನ್ನು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲಾಗಿದೆ. ಜೊತೆಗೆ ಈಗಾಗಲೇ ನಾಯಕನಾಗಿ ಘೋಷಿಸಲಾಗಿದ್ದ ಶಿಖರ್ ಧವನ್ ಗೆ ಉಪನಾಯಕನಾಗಿ ಹಿಂಬಡ್ತಿ ಕೊಡಲಾಗಿದ್ದು, ರಾಹುಲ್ ಗೆ ನಾಯಕತ್ವ ನೀಡಲಾಗಿದೆ.

ಬಹಳ ದಿನಗಳಿಂದ ಕ್ರಿಕೆಟ್ ನಿಂದ ದೂರವಿರುವ ರಾಹುಲ್ ಗೆ ಏಷ್ಯಾ ಕಪ್ ಗೆ ತಯಾರಾಗಲು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಹಾಗಿದ್ದರೂ ಈಗಾಗಲೇ ಧವನ್ ನಾಯಕರಾಗಿ ತಮ್ಮನ್ನು ಸಾಬೀತುಪಡಿಸಿದ್ದರೂ, ಅವರನ್ನು ನಾಯಕನಾಗಿ ಘೋಷಿಸಿದ ಮೇಲೆ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳೇ ಗರ್ಲ್ ಫ್ರೆಂಡ್ ಗೆ ಟಾಂಗ್ ಕೊಟ್ಟ ರಿಷಬ್ ಪಂತ್