Select Your Language

Notifications

webdunia
webdunia
webdunia
webdunia

ವಿಜಯ್ ಹಜಾರೆ ಟ್ರೋಫಿ ಕೂಟದಿಂದ ಹೊರಬಿದ್ದ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿ ಕೂಟದಿಂದ ಹೊರಬಿದ್ದ ಕರ್ನಾಟಕ
ನವದೆಹಲಿ , ಶುಕ್ರವಾರ, 12 ಮಾರ್ಚ್ 2021 (09:52 IST)
ನವದೆಹಲಿ: ಮುಂಬೈ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ 72 ರನ್ ಗಳಿಂದ ಸೋತು ಕೂಟದಿಂದ ಹೊರಬಿದ್ದಿದೆ.


ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 49.2 ಓವರ್ ಗಳಲ್ಲಿ 332 ರನ್ ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಭರ್ಜರಿ ಶತಕ ಗಳಿಸಿದ ಪೃಥ‍್ವಿ ಶಾ ಅಬ್ಬರದ ಮುಂದೆ ಕರ್ನಾಟಕ ಸೋತು ಹೋಯಿತು. ಪೃಥ್ವಿ 165 ರನ್ ಚಚ್ಚಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಆರಂಭಿಕ ದೇವದತ್ತ್ ಪಡಿಕ್ಕಲ್ 65 ರನ್ ಗಳಿಸಿದರೆ ಶರತ್ 61 ರನ್ ಗಳ ಕಾಣಿಕೆ ನೀಡಿದರು. ಉಳಿದವರಿಂದ ತಕ್ಕ ಸಾಥ್ ಸಿಗಲಿಲ್ಲ.

ಅಂತಿಮವಾಗಿ ಕರ್ನಾಟಕ 42.4 ಓವರ್ ಗಳಲ್ಲಿ 250 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದುವರೆಗೆ ಭರ್ಜರಿ ಪ್ರದರ್ಶನ ನೀಡುತ್ತಾ ಬಂದ ಕರ್ನಾಟಕ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಗಿಂತ ಕೆಎಲ್ ರಾಹುಲ್ ಬೆಸ್ಟ್ ಎಂದ ವಿವಿಎಸ್ ಲಕ್ಷ್ಮಣ್