Publish Date: Thu, 16 Nov 2017 (09:12 IST)
Updated Date: Thu, 16 Nov 2017 (09:14 IST)
ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಮಳೆ ಸುರಿದಿದ್ದರಿಂದ ಮೈದಾನ ಒದ್ದೆಯಾಗಿರುವುದರಿಂದ ನಿಗದಿತ ಸಮಯಕ್ಕೆ ಟಾಸ್ ಹಾಕಲಾಗಿಲ್ಲ. ಸ್ಥಳೀಯ ಸಮಯ 9.30 ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಟಾಸ್ ತಡವಾಗಿರುವುದರಿಂದ ಪಂದ್ಯವೂ ತಡವಾಗಿ ಆರಂಭವಾಗುವ ನಿರೀಕ್ಷೆಯಿದೆ.
ಬೆಳಗ್ಗೆ ಇಲ್ಲಿ ಮಳೆ ಸುರಿದಿಲ್ಲವಾದರೂ, ನಿನ್ನೆ ಮಳೆ ಅಬ್ಬರಿಸಿದ್ದರಿಂದ ಮೈದಾನವನ್ನು ಸಂಪೂರ್ಣವಾಗಿ ಒಣಗಿಸುವ ಕೆಲಸದಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಮಳೆಯಿಂದಾಗಿ ನಿನ್ನೆ ಟೀಂ ಇಂಡಿಯಾ ಅಭ್ಯಾಸ ರದ್ದುಗೊಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ