ಭಾರತ-ಆಸ್ಟ್ರೇಲಿಯಾ ತೃತೀಯ ಟಿ20 ಇಂದು: ಮಳೆ ಬಂದರೆ ಅನ್ಯಾಯವಾಗಿ ಭಾರತಕ್ಕೆ ಸರಣಿ ಸೋಲು

Webdunia
ಭಾನುವಾರ, 25 ನವೆಂಬರ್ 2018 (09:25 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ನಡೆದ ಎರಡು ಟಿ20 ಪಂದ್ಯಗಳಲ್ಲೂ ಮಳೆಯದ್ದೇ ಕಾರುಬಾರು. ಇದರಿಂದಾಗಿ ಅನ್ಯಾಯವಾಗಿರುವುದು ಮಾತ್ರ ಭಾರತಕ್ಕೆ.

ಇಂದು ಮೂರನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು, ಮತ್ತೆ ಮಳೆ ಬಂದರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಡಕ್ ವರ್ತ್ ಲೂಯಿಸ್ ನಿಯಮದ ಕೃಪೆಯಿಂದಾಗಿ ಆಸೀಸ್ ಮೊದಲ ಪಂದ್ಯವನ್ನು ಗೆದ್ದಿದೆ.

ದ್ವಿತೀಯ ಪಂದ್ಯ ಸಂಪೂರ್ಣವಾಗಿ ರದ್ದಾಗಿತ್ತು. ಇದರಿಂದಾಗಿ ಟೀಂ ಇಂಡಿಯಾಕ್ಕೆ ಸತತ ಏಳು ಟಿ20 ಸರಣಿ ಗೆಲುವಿನ ಸರಪಳಿ ಕಳಚಿತ್ತು. ಹಾಗಿದ್ದರೂ ಇಂದು ಮೂರನೇ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲ ಸಾಧಿಸಿದ ಸಮಾಧಾನವಾದರೂ ಇರುತ್ತದೆ.

ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಒಂದು ವೇಳೆ ಮಳೆ ಬಾರದೇ ಹೋಗಿದ್ದರೆ ಆ ಪಂದ್ಯವನ್ನು ಭಾರತ ಗೆಲ್ಲಬಹುದಾಗಿತ್ತು. ಇಂದು ಮತ್ತೆ ಅಂತಹದ್ದೇ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಗೆಲುವು ಸಾಧಿಸುವ ಉತ್ಸಾಹದಲ್ಲಿ ಕೊಹ್ಲಿ ಪಡೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅತ್ಯಾಚಾರ ಪ್ರಕರಣ: ದೆಹಲಿ ಕ್ಯಾಪಿಟಲ್ಸ್‌ ವಿಕೆಟ್ ಕೀಪರ್‌ ಅಭಿಷೇಕ್ ಪೊರೆಲ್‌ಗೆ ಬಂಧನ ಭೀತಿ

ಪ್ರಯಾಣದಲ್ಲಿ ದೊರೆತ ಅಭಿಮಾನಿಗಳ ಪ್ರೀತಿಯನ್ನು ಸ್ವೀಕರಿಸಿ, ವಿಶ್ರಾಂತಿ ಪಡೆಯಿರಿ: ಮೆಸ್ಸಿ ಆಟದ ಬಗ್ಗೆ ಬಿಗ್‌ಬಿ ಹೇಳಿದ್ದಿಷ್ಟು

ಎಲ್ಲರೂ ಫುಟ್ಬಾಲ್ ಫೈನಲ್ ನೋಡ್ತಿರುವಾಗ ಮೇಕೆ ಬಂದು ಹೀಗೆ ಮಾಡೋದಾ Video

IND vs ENG: ರೋಹಿತ್ ಶರ್ಮಾ ಔಟಾಗಿ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ Video

FIFA WC: ಅರ್ಜೆಂಟೀನಾ ಗೆಲ್ಲುತ್ತೆ, ಸಂಭ್ರಮಾಚರಣೆ ಮಾಡಲು ಶಾಲೆಗಳಿಗೆ ರಜೆ ಕೊಟ್ಟಿದ್ದ ಕೇರಳ: ಆದ್ರೆ ಆಗಿದ್ದೇ ಬೇರೆ

ಮುಂದಿನ ಸುದ್ದಿ
Show comments