Select Your Language

Notifications

webdunia
webdunia
webdunia
webdunia

ಸೆಮಿಫೈನಲ್ ಪಂದ್ಯಕ್ಕೆ ಮಿಥಾಲಿ ರಾಜ್ ರನ್ನು ಕೈಬಿಟ್ಟು ವಿವಾದಕ್ಕೀಡಾದ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್

ಸೆಮಿಫೈನಲ್ ಪಂದ್ಯಕ್ಕೆ ಮಿಥಾಲಿ ರಾಜ್ ರನ್ನು ಕೈಬಿಟ್ಟು ವಿವಾದಕ್ಕೀಡಾದ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್
ಗಯಾನ , ಶನಿವಾರ, 24 ನವೆಂಬರ್ 2018 (09:06 IST)
ಗಯಾನ: ವೆಸ್ಟ್ ಇಂಡೀಸ್ ನಲ್ಲಿ ನಿನ್ನೆ ನಡೆದ ಮಹಿಳಾ ಟಿ20 ವಿಶ್ವಕಪ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿ ಮಿಥಾಲಿ ರಾಜ್ ರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.

ಮಹತ್ವದ ಪಂದ್ಯಕ್ಕೆ ಫಾರ್ಮ್ ನಲ್ಲಿದ್ದ ಹಾಗೂ ಅನುಭವಿಯಾಗಿದ್ದ ಮಿಥಾಲಿ ರಾಜ್ ರನ್ನು ಹೊರಗಿಟ್ಟಿದ್ದು, ಧೋನಿಯನ್ನು ಹೊರಗಿಟ್ಟು ಟೀಂ ಇಂಡಿಯಾ ಮಹತ್ವದ ಪಂದ್ಯ ಆಡಿದಂತೆ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.

ಆದರೆ ಈ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿರುವ ನಾಯಕಿ ಹರ್ಮನ್ ಪ್ರೀತ್ ಮಿಥಾಲಿಯನ್ನು ಹೊರಗಿಟ್ಟಿದ್ದಕ್ಕೆ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ. ಏನೇ ನಿರ್ಧಾರ ತೆಗೆದುಕೊಂಡಿದ್ದರೂ ತಂಡದ ಹಿತದೃಷ್ಟಿಯಿಂದ ತೆಗೆದುಕೊಂಡಿದ್ದೇವೆ. ಕೆಲವೊಮ್ಮೆ ಅದು ಕೆಲಸ ಮಾಡಿರುತ್ತದೆ, ಕೆಲವೊಮ್ಮೆ ಕೈ ಕೊಡುತ್ತದೆ. ಅದಕ್ಕೆ ಪಶ್ಚಾತ್ತಾಪವಿಲ್ಲ ಎಂದು ಹರ್ಮನ್ ಹೇಳಿದ್ದಾರೆ. ಆದರೆ ಮಹತ್ವದ ಪಂದ್ಯಕ್ಕೆ ಮಿಥಾಲಿಯಂತಹ ಅನುಭವಿಯನ್ನು ಹೊರಗಿಟ್ಟಿದ್ದಕ್ಕೇ ಭಾರತಕ್ಕೆ ಸೋಲಾಯಿತು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಾಮೆಂಟರಿ ಮಾಡಿ ವಿವಾದಕ್ಕೀಡಾದ ಕ್ರಿಕೆಟಿಗ ರಾಬಿನ್ ಉತ್ತಪ್ಪ