Publish Date: Mon, 23 Jun 2025 (09:58 IST)
Updated Date: Mon, 23 Jun 2025 (10:20 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಲೀಡ್ಸ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂತ್ಯಕ್ಕೆ ಮಳೆಯಿಂದಾಗಿ ದಿನದಾಟ ಬೇಗನೇ ಮುಕ್ತಾಯಗೊಳಿಸಲಾಯಿತು. ಮಳೆ ಬಂತೆಂದು ಕೆಎಲ್ ರಾಹುಲ್ ತಮ್ಮ ಬ್ಯಾಟ್ ಮುಚ್ಚಿಟ್ಟುಕೊಂಡ ಪರಿ ಈಗ ಎಲ್ಲರ ಗಮನಸೆಳೆಯುತ್ತಿದೆ.
ಕೆಎಲ್ ರಾಹುಲ್ ತಮ್ಮ ಬ್ಯಾಟ್, ಗ್ಲೌಸ್ ಗಳನ್ನು ದೇವರ ಸಮಾನವೆಂದು ಪರಿಗಣಿಸುತ್ತಾರೆ. ಇದಕ್ಕೆ ಈ ಹಿಂದೊಮ್ಮೆ ಅವರು ಗ್ಲೌಸ್ ನೆಲಕ್ಕೆ ಬಿದ್ದಾಗ ನಮಸ್ಕರಿಸಿ ಮತ್ತೆ ಅದನ್ನು ಎತ್ತಿಕೊಂಡ ವಿಡಿಯೋವೇ ಸಾಕ್ಷಿ. ನಿನ್ನೆಯ ಪಂದ್ಯದಲ್ಲೂ ಅವರು ತಮ್ಮ ಬ್ಯಾಟ್ ನ್ನು ಅಷ್ಟೇ ಜೋಪಾನವಾಗಿ ಕಾಯ್ದುಕೊಂಡಿದ್ದಾರೆ.
ಬ್ಯಾಟಿಗರಿಗೆ ಬ್ಯಾಟ್ ಸುಸ್ಥಿತಿಯಲ್ಲಿರುವುದು ತುಂಬಾ ಮುಖ್ಯ. ನಿನ್ನೆ ಮೈದಾನದಿಂದ ಹೊರ ನಡೆಯುವಾಗ ಮಳೆ ಸುರಿಯುತ್ತಿತ್ತು. ಹೀಗಾಗಿ ಬ್ಯಾಟ್ ಹೊರಗಿಟ್ಟುಕೊಂಡು ಹೋದರೆ ಒದ್ದೆಯಾಗುವ ಭೀತಿಯಿತ್ತು. ಈ ಕಾರಣಕ್ಕೆ ರಾಹುಲ್ ಅದನ್ನು ತಮ್ಮ ಶರ್ಟ್ ಒಳಗೆ ಅಡಗಿಸಿಟ್ಟುಕೊಂಡು ಪೆವಿಲಿಯನ್ ಗೆ ತೆರಳಿದ್ದಾರೆ.
ರಾಹುಲ್ ರ ಈ ವಿಭಿನ್ನ ನಡೆ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಯಾರೂ ಬ್ಯಾಟ್ ಬಗ್ಗೆ ಇಷ್ಟೊಂದು ಶ್ರದ್ಧೆ ವಹಿಸುವುದಿಲ್ಲ. ಇದಲ್ಲದೇ ಇದ್ದರೆ ಇನ್ನೊಂದು ಬ್ಯಾಟ್ ಎಂದು ಒದ್ದೆಯಾಗಲು ಬಿಡಬಹುದಿತ್ತು. ಆದರೆ ರಾಹುಲ್ ಹಾಗೆ ಮಾಡಿಲ್ಲ ಎನ್ನುವುದು ವಿಶೇಷ.